ಪ್ರೇಯಸಿಯ ಕತ್ತು ಕತ್ತರಿಸಿ ರುಂಡದೊಂದಿಗೆ ಪೆÇಲೀಸ್ ಠಾಣೆಗೆ ಹಾಜರಾದ

ಚಿಂತಾಮಣಿ, ಸೆ.28-ಪ್ರೀತಿಸಿದ ಯುವತಿ ಬೇರೊಬ್ಬನೊಂದಿಗೆ ಓಡಾಡುತ್ತಿದ್ದಾಳೆಂದು ಆಕ್ರೋಶಗೊಂಡು ಯುವಕ ಆಕೆಯ ಕತ್ತು ಕತ್ತರಿಸಿ ರುಂಡದೊಂದಿಗೆ ಪೆÇಲೀಸ್ ಠಾಣೆಗೆ ಹಾಜರಾದ ಹೇಯ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಜೀಜ್ ಅಲಿಯಾಸ್ ಸದ್ದಾಂ ಹುಸೇನ್ (26) ತಾನು ಪ್ರೀತಿಸಿದ ಯುವತಿ ಬೆಂಗಳೂರಿನ ನೀಲಸಂದ್ರದ ರೋಷನ್ ಖಾನಂ (26) ಎಂಬಾಕೆಯನ್ನು ಕೊಲೆ ಮಾಡಿ ರುಂಡದೊಂದಿಗೆ ಠಾಣೆಗೆ ಬಂದ ಭೂಪ.
ರೋಷನ್‍ಖಾನಂಳನ್ನು ಅಜೀಜ್ ಪ್ರೀತಿಸಿದ್ದ. ಆದರೆ ಇತ್ತೀಚೆಗೆ ಬೇರೆ ಯುವಕನ ಜತೆ ಓಡಾಡುತ್ತಿದ್ದಳು. ಇದನ್ನು ಸಹಿಸದೆ ಆತ ಅವಳನ್ನು ಕೊಲೆ ಮಾಡಲು ಸಂಚು ರೂಪಿಸಿದ. ಅದರಂತೆ ನಿನ್ನೆ ರೋಷನ್‍ಖಾನಂಳನ್ನು ಮುರಗಮಲ್ಲಾ ದರ್ಗಾಗೆ ಬರುವಂತೆ ಅಜೀಜ್ ಹೇಳಿದ್ದಾನೆ. ಆಕೆಗೆ ದರ್ಗಾದ ಅಮ್ಮಾಜಾನ್ ಭಾವಜಾನ್ ದರ್ಶನ ಮಾಡಿಸಿ ಕೆಂಚಾರ್ಲಹಳ್ಳಿ ಹೊರವಲಯದ ಮಾವಿನ ತೋಪಿಗೆ ಕರೆದುಕೊಂಡು ಹೋಗಿ ತಕ್ಷಣ ಆಕೆಯಕತ್ತು ಕತ್ತರಿಸಿ ರುಂಡವನ್ನು ಬ್ಯಾಗ್‍ನಲ್ಲಿ ಹಾಕಿಕೊಂಡು ಉಳಿದ ಭಾಗವನ್ನು ಅಲ್ಲೇ ಬಿಟ್ಟು ದ್ವಿಚಕ್ರ ವಾಹನಲ್ಲಿ ಶ್ರೀನಿವಾಸಪುರ ಠಾಣೆಗೆ ಹೋಗಿದ್ದಾನೆ.
ಅಲ್ಲಿನ ಪೆÇಲೀಸರು ರಕ್ತಮಯವಾಗಿದ್ದ ಬ್ಯಾಗ್ ಕಂಡು ಅಜೀಜ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ಓಡಾಡುತ್ತಿದ್ದುದನ್ನು ಸಹಿಸಲಾಗಲಿಲ್ಲ. ಅದಕ್ಕೆ ಅವಳ ತಲೆ ಕಡಿದು ತಂದಿದ್ದೇನೆ ಎಂದು ಹೇಳಿದ್ದಾನೆ.
ಘಟನೆ ನಡೆದಿರುವುದು ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯಾಗಿರುವುದರಿಂದ ಆರೋಪಿಯನ್ನು ಇಲ್ಲಿನ ಠಾಣೆಗೆ ಒಪ್ಪಿಸಲಾಗಿದೆ.
ಸ್ಥಳಕ್ಕೆ ಕೆಂಚಾರ್ಲಹಳ್ಳಿ ಠಾಣೆ ಪಿಎಸ್‍ಐ ಶ್ರೀನಿವಾಸ್, ಸಿಪಿಐ ಭೆರಪ್ಪ ಭೇಟಿ ನೀಡಿ ಪರಿಶೀಲಿಸಿ ಯುವತಿಯ ರುಂಡವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ