ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು, ಸೆ.27- ವಿಶ್ವ ಹೃದಯ ದಿನದ ಅಂಗವಾಗಿ ಇದೇ 29ರಂದು ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಇಸಿಜಿ, ಮಧುಮೇಹ, ಅಧಿಕ ರಕ್ತದೊತ್ತಡ, ಇಎನ್‍ಟಿ, ಮೂಳೆರೋಗ, ಕಿಡ್ನಿ, ಮೂತ್ರಕೋಶ ತಪಾಸಣೆ ಮಾಡಲಾಗುತ್ತದೆ. ಶಿಬಿರವು 29 ರಂದು ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ನಡೆಯಲಿದೆ ಎಂದು ಪುಣ್ಯ ಆಸ್ಪತ್ರೆಯ ಡಾ.ನಾಗರಾಜ್ ತಿಳಿಸಿದ್ದಾರೆ.

ಶಿಬಿರದಲ್ಲಿ ಹೆಸರಾಂತ ಕೊಲೆಸ್ಟ್ರಾಲ್ ಸರ್ಜನ್ ಡಾ.ನಾಗರಾಜ್, ಬಿ.ಪುಟ್ಟಸ್ವಾಮಿ, ಲ್ಯಾಪೆÇ್ರಸ್ಕೋಪಿಕ್ ಗಯಿನೆಕ್ ಸರ್ಜನ್ ಡಾ.ಪುಣ್ಯಪತಿ ಸಿ.ನಾಗರಾಜ್ ರೋಗಿಗಳ ತಪಾಸಣೆ ಮಾಡುವರು.
ಶಿಬಿರ ಪುಣ್ಯ ಆಸ್ಪತ್ರೆ, 40 ಅಡಿ ರಸ್ತೆ, ಕೆಎಚ್‍ಬಿ ಕಾಲೋನಿ, ಬಸವೇಶ್ವರ ನಗರ, ಬೆಂಗಳೂರು ಇಲ್ಲಿ ಇದೇ ಶನಿವಾರ ನಡೆಯಲಿದೆ. ಹೆಸರು ನೋಂದಾಯಿಸಲು ದೂ.ಸಂ.080-49294929, 99000061061, 9164433888 ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ