ಕಾಂಗ್ರೆಸ್- ಜೆಡಿಎಸ್ ಶಾಸಕರು ನಿರ್ವೀರ್ಯರಾಗಿದ್ದಾರೆ: ಬಿಜೆಪಿ ಮಾಜಿ ಸಂಸದ ಜಿ.ಎಸ್.ಬಸವರಾಜು

ತುಮಕೂರು: “ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವೀರ್ಯರು ಅಂತಾ ತುಮಕೂರಿನ ಬಿಜೆಪಿ ಮಾಜಿ ಸಂಸದ ಜಿ.ಎಸ್.ಬಸವರಾಜು ವಾಗ್ದಾಳಿ ನಡೆಸಿದ್ದಾರೆ.

ಇಂದು‌ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಕಾಂಗ್ರೆಸ್-ಜೆಡಿಎಸ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ..ತುಮಕೂರು ಜಿಲ್ಲೆಯ ಮೂವರು ಮಂತ್ರಿಗಳು ಸೇರಿದಂತೆ ಕಾಂಗ್ರೆಸ್- ಜೆಡಿಎಸ್ ಶಾಸಕರು ನಿರ್ವೀರ್ಯರಾಗಿದ್ದಾರೆ,ತುಮಕೂರು ಜಿಲ್ಲೆಯನ್ನ ನಾಶ ಮಾಡಲು ಇವರೂ ಮುಂದಾಗಿದ್ದು,ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ನಿರ್ವೀಯರು ಅಂತಾ ಜರಿದಿದ್ದಾರೆ.

ಪರಮೇಶ್ವರ್ ಝಿರೋ ಟ್ರಾಫಿಕ್ ಗೋಸ್ಕರ ಹೊರಾಡ್ತಾರೆ,ಡಿ.ಕೆ. ಬ್ರದರ್ಸ್ ದಬ್ಬಾಳಿಕೆ ಜಿಲ್ಲೆ ಮೇಲೆ ಹೆಚ್ಚಾಗಿದ್ದು,,ಜಿಲ್ಲೆಗೆ ಬರುವ ಹೇಮಾವತಿ ನೀರನ್ನು ಮಾಗಡಿ-ಕನಕಪುರಕ್ಕೆ ಕೊಂಡೊಯ್ಯಲು ಹುನ್ನಾರ ನಡೆಸಿದ್ದಾರೆ. ಲಿಂಕಿಂಗ್ ಕೆನಾಲ್ ಮೂಲಕ ನೀರು ಸಾಗಿಸಲು ಪ್ಲಾನ್ ಮಾಡಿದ್ದಾರೆ. ಇಷ್ಟಾದರೂ ಜಿಲ್ಲೆಯ ಕಾಂಗ್ರೆಸ್- ಜೆಡಿಎಸ್ ಚಕಾರ ಎತ್ತುತಿಲ್ಲ. ಡಿ.ಕೆ.ಶಿವಕುಮಾರ್ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ ಅವರನ್ನು ತುಮಕೂರು ನಗರದ ಒಳಗೆ ಸೇರಿಸಲ್ಲಾ ಅಂತಾ ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ