ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶ್ರದ್ಧಾ ಶ್ರೀನಾಥ್ ಮೊದಲ ಶೂಟಿಂಗ್

ಬೆಂಗಳೂರು: ನಟಿ ಶ್ರದ್ಧಾ ಶ್ರೀನಾಥ್ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಗೆ ಭಏಟಿ ನೀಡಿದ್ದರು, ಈ ಮೊದಲು ಶಾಲೆಯಿಂದ ರಾಮೋಜಿ ಫಿಲ್ಮ್ ಸಿಟಿಗೆ ತೆರಳಿದ್ದ ಶ್ರದ್ಧಾ ಒಬ್ಬ ನಟಿಯಾಗಿ ಪ್ರವೇಶಿಸಿದ್ದಾರೆ,
ರುಸ್ತುಂ ಸಿನಿಮಾಗಾಗಿ  ರಾಮೋಜಿ ಫಿಲಂ ಸಿಟಿಯಲ್ಲಿ ನಡೆದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈಗ ನನಗೆ ಪ್ರಾಪರ್ ಹಿರೋಯಿನ್ ಎನ್ನಿಸುತ್ತದೆ,. ನನಗೆ ಇಲ್ಲಿ ತುಂಬಾ ವಿಭಿನ್ನ ಅನುಭವವಾಯಿತು, ಎಂದು ಹೇಳಿರುವ ಶ್ರದ್ಧಾ ಕರ್ನಾಟಕದಲ್ಲೂ ಒಂದು ರಾಮೋಜಿ ಸಿಟಿ ಬೇಕು ಎಂದು ತಿಳಿಸಿದ್ದಾರೆ.
ರವಿವರ್ಮ ನಿರ್ದೇಶನದ ರುಸ್ತು ಚಿತ್ರದಲ್ಲಿ ಶ್ರದ್ಧಾ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದ್ದಾರೆ, ಈ ತಿಂಗಳ ಅಂತ್ಯದಲ್ಲಿ ನನ್ನ ನಟನೆಯ ಭಾಗದ ಶೂಟಿಂಗ್ ಮುಗಿಯಲಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಯಲಿದೆ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಮಗುವಿನಂತ ಮನಸ್ಸು. ಯಾವಾಗಲೂ ತಮಾಷೆ ಮಾಡುತ್ತಾ ಸೆಟ್ ನಲ್ಲಿ ಖುಷಿಯಾಗಿರುತ್ತಾರೆ. ಅವರೊಬ್ಬ ಉತ್ತಮ ಕೇಳುಗ ಕೂಡ ಎಂದು ಶ್ರದ್ಧಾ ಹೊಗಳಿದ್ದಾರೆ.  ಸದ್ಯ ಶ್ರದ್ದಾ ತಮ್ಮ ಬಾಲಿವುಡ್ ಪ್ರಾಜೆಕ್ಟ್ ಕೂಡ ಪೂರ್ಣಗೊಳಿಸಿದ್ದಾರೆ,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ