ಸುರಾಜ್ ಗೌಡ ಮುಂದಿನ ಸಿನಿಮಾ ‘ಲಕ್ಷ್ಮಿತನಯ ‘ಕ್ಕೆ ಸಹಿ

ಮದುವೆಯ ಮಮತೆಯ ಕರೆಯೋಲೊ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸುರಾಜ್  ಗೌಡ ,  ಮುಂದಿನ ಸಿನಿಮಾ ಲಕ್ಷ್ಮಿ ತನಯದಲ್ಲಿ ನಾಯಕ ನಟನಾಗಿ  ಅಭಿನಯಿಸುತ್ತಿದ್ದಾರೆಅಚ್ಯುತ್ ರಾವ್, ಸಿತಾರಾ, ಸಾಧುಕೋಕಿಲ, ಚಿಕ್ಕಣ್ಣ, ಕೆ. ಆರ್. ಪೇಟೆ  ಶಿವರಾಜ್ ಹಾಗೂ ಧರ್ಮಣ್ಣ ಮತ್ತಿತರರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ತೆಲುಗಿನ ವೆಂಕಟೇಶ್ ಬಾಬು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದು, ಸೆಪ್ಟೆಂಬರ್ 19 ರಂದು ಮೂಹೂರ್ತ ನಡೆಯಲಿದೆ. ರಂಗಸ್ಥಳಂ ನಿರ್ದೇಶಕ ಸುಕುಮಾರ್  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು,  ದಿನಕರ್ ತೂಗುದೀಪ್  ಕ್ಯಾಮರಾಕ್ಕೆ ಚಾಲನೆ ನೀಡಲಿದ್ದಾರೆ. ವೆಂಕಟೇಶ್  ತೆಲುಗು ಚಿತ್ರಗಳಲ್ಲಿ ಸುಕುಮಾರ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದು, ಸಾಹಸ ನಿರ್ದೇಶಕ ವಿಜಯ್ ಕೂಡಾ ಈ ಹಿಂದೆ ಮಹೇಶ್ ಬಾಬು ಅವರೊಂದಿಗೆ  ಕೆಲಸ ಮಾಡಿದ್ದಾರೆ . ನವೆಂಬರ್ ತಿಂಗಳಿನಿಂದ  ಚಿತ್ರದ ಚಿತ್ರೀಕರಣ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ