ಅರುಣ್ ಜೇಟ್ಲಿ-ವಿಜಯ್ ಮಲ್ಯ ಭೇಟಿ ವಿಚಾರ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ನವದೆಹಲಿ: ಉದ್ಯಮಿ ವಿಜಯ ಮಲ್ಯ ಲಂಡನ್​​ಗೆ ಪಲಾಯನ ಮಾಡುವ ವಿಚಾರ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಗೊತ್ತಿದ್ದರು ಕೇಂದ್ರ ತನಿಖಾ ಸಂಸ್ಥೆಗಳಿಗೇಕೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರನ್ನು ತಾನು ಭೇಟಿಯಾಗಿದ್ದೇ ಎಂದು ವಿಜಯ್​ ಮಲ್ಯ ಹೇಳಿಕೆ ನಿದಿದ್ದು, ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾರ್ಚ್​ 1, 2016ರಂದು ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಜೇಟ್ಲಿ ಮತ್ತು ಮಲ್ಯ ನಡುವೆ ನಡೆದ ಮಾತುಕತೆಯನ್ನು ಕಾಂಗ್ರೆಸ್​​ ಮುಖಂಡ ಪಿ.ಎಲ್​. ಪುನಿಯಾ ಅವರು ನೋಡಿದ್ದಾರೆಂದು ರಾಹುಲ್​ ಪ್ರತಿಪಾದಿಸಿದರು.

ಜೇಟ್ಲಿ ಅವರ ರಾಜೀನಾಮೆಗೆ ಆಗ್ರಹಿಸಿರುವ ರಾಹುಲ್​, ವಿಜಯ್ ಮಲ್ಯ ಪಲಾಯನ ಒಂದು ಒಳಸಂಚು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಅವರಿಬ್ಬರ ನಡುವೆ ಕೆಲವು ಒಪ್ಪಂದಗಳು ನಡೆದಿದೆ. ಕೂಡಲೇ ಜೇಟ್ಲಿ ಅವರು ರಾಜಿನಾಮೆ ನೀಡಬೇಕು. ಈ ಸಂಬಂಧ ತನಿಖೆ ನಡೆಯಬೇಕೆಂದು ರಾಹುಲ್​ ಒತ್ತಾಯಿಸಿದ್ದಾರೆ.

ಮಲ್ಯ ಅವರ ಹಸ್ತಾಂತರ ಕುರಿತಾಗಿ ಲಂಡನ್​ನ ವೆಸ್ಟ್​ಮಿನಿಸ್ಟರ್ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೂ ಮೊದಲೇ ದೇಶ ಬಿಡುವ ಮುನ್ನ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ ಎಂದು ಮಲ್ಯ ಆರೋಪಿಸಿದ್ದರು.

ಮಲ್ಯ ಲೋಕಸಭೆ ಮೊಗಸಾಲೆಯಲ್ಲಿ ನನ್ನನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದು ನಿಜ. ಸಾಲ ಮರು ಪಾವತಿಯ ಬಗ್ಗೆ ಬ್ಯಾಂಕರ್​ಗಳ ಜತೆ ಮಾತನಾಡಿ ಎಂದಷ್ಟೇ ಹೇಳಿದ್ದೆ ಎಂದು ಅರುಣ್​​ ಜೇಟ್ಲಿ ಅವರು ಸಮರ್ಥನೆ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ