ಕರ್ತವ್ಯನಿರತ ಕಾನ್‍ಸ್ಟೆಬಲ್ ಹಾಗೂ ಹೋಂಗಾರ್ಡ್ ಮೇಲೆ ಹಲ್ಲೆ

ಬೆಂಗಳೂರು, ಸೆ.12-ಕರ್ತವ್ಯನಿರತ ಕಾನ್‍ಸ್ಟೆಬಲ್ ಹಾಗೂ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನನ್ನು ಬಸವೇಶ್ವರ ನಗರ ಠಾಣೆ ಪೆÇಲೀಸರು ಬಂಧಿಸಿದ್ದು, ಈ ವೇಳೆ ಮೂವರು ಪರಾರಿಯಾಗಿದ್ದಾರೆ.
ರಂಗನಾಥ್ ಬಂಧಿತ ಆರೋಪಿಯಾಗಿದ್ದು, ಈತನನ್ನು ವಿಚಾರಣೆಗೊಳಪಡಿಸಿದ್ದಾರೆ.
ಮೋದಿ ರಸ್ತೆಯ ಬ್ರಿಡ್ಜ್ ಸಮೀಪ ರಾತ್ರಿ 8 ಗಂಟೆ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸುದ್ದಿ ತಿಳಿದ ವಿಜಯನಗರ ಸಂಚಾರಿ ವಿಭಾಗದ ಕಾನ್‍ಸ್ಟೆಬಲ್ ಶಶಿಕುಮಾರ್ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ಮಹೇಶ್ ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು.
ಈ ಸಂದರ್ಭದಲ್ಲಿ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ವಿನಾಕಾರಣ ಕರ್ತವ್ಯ ನಿರತ ಶಶಿಕುಮಾರ್ ಹಾಗೂ ಮಹೇಶ್ ಜೊತೆ ಜಗಳವಾಡಿ ಹಲ್ಲೆ ನಡೆಸಿದ್ದಾರೆ.
ತಕ್ಷಣ ಬಸವೇಶ್ವರನಗರ ಪೆÇಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೆÇಲೀಸರು ನಾಲ್ವರನ್ನು ಹಿಡಿಯಲು ಮುಂದಾದಾಗ ಮೂವರು ಪರಾರಿಯಾಗಿದ್ದು, ರಂಗನಾಥ್ ಎಂಬಾತ ಪೆÇಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಮೂವರಿಗಾಗಿ ಶೋಧ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ