
ಗುವಾಹಟಿ: ಏಷ್ಯನ್ಸ್ ಗೇಮ್ಸ್ನಲ್ಲಿ ಈ ಬಾರಿ ಭಾರತದ ಅಥ್ಲೀಟ್ಗಳು ಮೇರು ಸಾಧನೆ ಮಾಡಿದ್ದಾರೆ. ಅದರಲ್ಲೂ ಚಿನ್ನದ ಪದಕ ವಿಜೇತೆ ಹಿಮಾದಾಸ್ ಮೂರು ಪದಕಗಳನ್ನ ಮುಡಿಗೇರಿಸಿಕೊಳ್ಳುವ ಮೂಲಕ ಅಸ್ಸೋಂಗೆ ಆ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಅಸ್ಸೋಂ ಸರ್ಕಾರ ಹಾಗೂ ಅವರ ಅಭಿಮಾನಿಗಳು ಸ್ವದೇಶಕ್ಕೆ ಆಗಮಿಸಿದ ಚಿನ್ನದ ಓಟಗಾರ್ತಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಸ್ಪೆಷಲ್ ಸರ್ಪ್ರೈಸ್ ಅನ್ನೂ ನೀಡಿದರು. ಹಿಮಾದಾಸ್ಗಾಗಿ ಗುವಾಹಟಿ ಏರ್ಪೋರ್ಟ್ನಲ್ಲಿ 1,2,3,4,5,6 ಹೀಗೆ ರನ್ನಿಂಗ್ ಟ್ರ್ಯಾಕ್ಗಳನ್ನೇ ನಿರ್ಮಾಣ ಮಾಡಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಈ ವೇಳೆ ಗಂಟೆಗೂ ಹೆಚ್ಚು ಕಾಲ ಕಾದ ಸಿಎಂ ಸರ್ಬಾನಂದ ಸೋನೋವಾಲ್ ಹಾಗೂ ಹಣಕಾಸು ಸಚಿವ ಹಿಮಂತ ಬಿಸ್ವಾ ಸರ್ಮಾ ಹಾಗೂ ಸಾವಿರಾರು ಅಭಿಮಾನಿಗಳು ಹಿಮಾದಾಸ್ಗೆ ಅದ್ದೂರಿ ಸ್ವಾಗತ ಕೋರಿದರು.
ಆ ಬಳಿಕ ಸಿಎಂ ಸಮ್ಮುಖದಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ ನಡೆಸಿ, ಚಿನ್ನದ ಓಟಗಾರ್ತಿಗೆ 1.6 ಕೋಟಿ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ನಡುವೆ ಹಿಮಾದಾಸ್ ಅವರ ಹುಟ್ಟುರಾದ ನಾಗೋನ್ ಜಿಲ್ಲೆಯ ಕಂದೂಲಮರಿ ಗ್ರಾಮದ ದಿಂಗಾದಲ್ಲಿ ಅಥ್ಲೀಟ್ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅಸ್ಸೋಂ ನೀರಾವರಿ ಸಚಿವ ಕೇಶವ್ ಮಹಾಂತ ಅವರು ಹೇಳಿದ್ದಾರೆ.