ಪ್ರತಿದಿನ ಕುಡಿದು ಮನೆಗೆ ಬಂದು ಜಗಳವಾಡುತ್ತಿದ್ದ ಅಣ್ಣನನ್ನು ಚಾಕುವಿನಿಂದ ಕುತ್ತಿಗೆ ಇರಿದು ತಮ್ಮನ ಕೊಲೆ

ಬೆಂಗಳೂರು,ಸೆ.7- ಪ್ರತಿದಿನ ಕುಡಿದು ಮನೆಗೆ ಬಂದು ಜಗಳವಾಡುತ್ತಿದ್ದ ಅಣ್ಣನನ್ನು ಚಾಕುವಿನಿಂದ ಕುತ್ತಿಗೆ ಇರಿದು ತಮ್ಮನೇ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚುಂಚಘಟ್ಟದ ನಿವಾಸಿ ವಿನಯ್(25) ಕೊಲೆಯಾದ ನತದೃಷ್ಟ. ಕೊಲೆಗೆ ಸಂಬಂಧಿಸಿದಂತೆ ಕಾಲ್ ಸೆಂಟರ್ ಉದ್ಯೋಗಿಯಾಗಿರುವ ಸಹೋದರ ಸಂಜಯ್(21)ನನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಟಿವಿ ರಿಪೇರಿ ಮೆಕಾನಿಕ್ ಆಗಿದ್ದ ವಿನಯ್ ಪ್ರತಿದಿನ ಕುಡಿದುಕೊಂಡು ಮನೆಗೆ ಬಂದು ಜಗಳವಾಡುತ್ತಿದ್ದನು. ಈತನಿಗೆ ಮನೆಯವರು ಬುದ್ದಿವಾದ ಹೇಳಿದರೂ ತನ್ನ ಛಾಳಿ ಬಿಟ್ಟಿರಲಿಲ್ಲ.
ರಾತ್ರಿ ಸಹ ವಿನಯ್ ಕುಡಿದುಬಂದು ತಮ್ಮ ಸಂಜಯ್‍ನೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಸಂಜಯ್ ಚಾಕುವಿನಿಂದ ಅಣ್ಣ ವಿನಯ್‍ನ ಕುತ್ತಿಗೆಗೆ ಬಲವಾಗಿ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ಕೋಣನಕುಂಟೆ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಂಜಯ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಪ್ರತಿದಿನ ಅಣ್ಣ ವಿನಯ್ ಕುಡಿದು ಬಂದು ಕ್ಷುಲ್ಲಕ ವಿಚಾರಕ್ಕೆ ವಿನಾಕಾರಣ ಜಗಳವಾಡುತ್ತಿದ್ದ ಎಂದು ಪೆÇಲೀಸರ ಮುಂದೆ ಸಂಜಯ್ ಹೇಳಿಕೆ ನೀಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ