ಮೈಸೂರು ಮಹಾನಗರ ಪಾಲಿಕೆ ಚುನಾವಣೆಫಲಿತಾಂಶ ಸಮಾಧಾನ ತಂದಿದೆ

ಮೈಸೂರು, ಸೆ.3-ಮೈಸೂರು ಮಹಾನಗರ ಪಾಲಿಕೆ ಚುನಾವಣೆಫಲಿತಾಂಶ ಸಮಾಧಾನ ತಂದಿದೆ. ಜೆಡಿಎಸ್‍ನವರು ಒಪ್ಪಿದರೆ ಅಧಿಕಾರ ಹಿಡಿಯುತ್ತೇವೆ. ಇಲ್ಲದಿದ್ದರೆ ಪ್ರತಿಪಕ್ಷದಲ್ಲಿ ಕೂರುತ್ತೇವೆ ಎಂದು ಸಂಸದ ಪ್ರತಾಪ್‍ಸಿಂಹ ಹೇಳಿದರು.
ಫಲಿತಾಂಶ ಪ್ರಕಟಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೇವಲ 13 ಸ್ಥಾನ ಗಳಿಸಿದ್ದೆವು. ಈ ಬಾರಿ 22 ವಾರ್ಡ್‍ಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೆಚ್ಚು ಸಾಧನೆ ಮಾಡಿz್ದÉೀವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದರೂ ಮೈಸೂರಿನಲ್ಲಿ ನಮಗೆ ಜನತೆಯ ಬೆಂಬಲ ಸಿಕ್ಕಿದೆ. ಕಳೆದ ಬಾರಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಪಾಲಿಕೆಯ ಅಧಿಕಾರ ಹಿಡಿದಿದ್ದೆವು. ಈ ಬಾರಿ ಆಯ್ಕೆಯನ್ನು ಜೆಡಿಎಸ್‍ಗೇ ಬಿಟ್ಟಿz್ದÉೀವೆ ಎಂದು ಹೇಳಿದರು.
ಜೆಡಿಎಸ್ ನಮ್ಮೊಂದಿಗೆ ಬಂದರೆ ಪಾಲಿಕೆಯಲ್ಲಿ ನಾವು ಆಡಳಿತ ನಡೆಸುತ್ತೇವೆ. ನಿರ್ಧಾರ ಅವರಿಗೇ ಬಿಟ್ಟದ್ದು. ಅವರು ಬಾರದೆ ಇದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇವೆ ಎಂದು ಪ್ರತಾಪ್‍ಸಿಂಹ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ