ಲಾರಿ ಡಿಕ್ಕಿ ಹೊಡೆದು ಪ್ಲಂಬರ್ ಒಬ್ಬರು ಸಾವು

ಬೆಂಗಳೂರು.ಸೆ.1- ಲಾರಿ ಡಿಕ್ಕಿ ಹೊಡೆದು ಪ್ಲಂಬರ್ ಒಬ್ಬರು ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಜಾಲಹಳ್ಳಿಯ ಶಾರದಾಂಬ ನಗರದ ನಿವಾಸಿ,ಪ್ಲಂಬರ್ ವೆಂಕಟ ರತ್ನಂ(43) ಮೃತಪಟ್ಟ ವ್ಯಕ್ತಿ.
ರಾತ್ರಿ 9.45ರಲ್ಲಿ ಎಂಇಎಸ್ ರಿಂಗ್ ರಸ್ತೆಯ ಕೃಷ್ಣ ಸೆರಾಮಿಕ್ ಅಂಗಡಿ ಎದುರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಲಾರಿ ಇವರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ವೆಂಕಟ ರತ್ನಂ ತೀವ್ರ ಗಾಯಗೊಂಡಿದ್ದು, ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಸಂಬಂಧ ಜಾಲಹಳ್ಳಿ ಸಂಚಾರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ