ಕೆಸಿಸಿಗೆ ಭದ್ರತೆ ನೀಡಲು ಸುದೀಪ್‌ ಮನವಿ

ಬೆಂಗಳೂರು: ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್‌ ಸೆ.8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪೊಲೀಸ್ ಭದ್ರತೆ ನೀಡುವಂತೆ ನಟ ಸುದೀಪ್ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಪೊಲೀಸ್ ಇಲಾಲೆಯಿಂದ ಭದ್ರತೆ ಹಾಗೂ ಸಹಕಾರ ನೀಡುವಂತೆ ಕೋರಿದ್ದು, ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೇವೆ ಎಂದರು.

ಪಂದ್ಯಾವಳಿ ದಿನದಂದು ಕೊಡಗು ನೆರೆ ಸಂತ್ರಸ್ತರಿಗು ತಂಡದಿಂದ ನೆರವು ನೀಡುವ ಬಗ್ಗೆ ಸುದೀಪ್ ಅವರ ನಿಲುವು ಶ್ಲಾಘನಾರ್ಹ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ