ಶ್ರಾವಣ ಸಂಜೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಬೆಂಗಳೂರು, ಆ.29- ಹೇರೋಹಳ್ಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆ.9ರಂದು ಸಂಜೆ 4.30ಕ್ಕೆ ತುಂಗಾ ನಗರದ ಹೆರಿಟೇಜ್ ಭವನದಲ್ಲಿ ಶ್ರಾವಣ ಸಂಜೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ದೇವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ರಾಜಾಜಿನಗರದ ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಶಿವಕುಮಾರ ಸ್ವಾಮಿ ಉಪನ್ಯಾಸ ನೀಡಲಿದ್ದು, ಆಶ್ರಯ ಕಮಿಟಿಯ ಮಾಜಿ ಅಧ್ಯಕ್ಷ ತ್ರಿಪುರಾಂತಕಮೂರ್ತಿ (ರೇಣುಕಪ್ಪ) ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸ್ಥಾಪಕ ಅಧ್ಯಕ್ಷ ಎಸ್.ಎಂ.ರುದ್ರಪ್ಪ, ಗೌರವಾಧ್ಯಕ್ಷ ಎಚ್.ಎಸ್.ಉಮಾಶಂಕರ್, ಅಧ್ಯಕ್ಷ ಬಿ.ಎಸ್.ಪ್ರಭುದೇವರು, ಉಪಾಧ್ಯಕ್ಷ ಜಿ.ಎಸ್.ಹೊನ್ನಶಾಮಯ್ಯ, ನಾಗರತ್ನಮ್ಮ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದಕ್ಷಿಣಾಮೂರ್ತಿ, ಜಂಟಿ ಕಾರ್ಯದರ್ಶಿ ಜಿ.ಎಸ್.ರೇಣುಕಾಪ್ರಸಾದ್, ರಾಜೇಶ್ವರಿ, ಖಜಾಂಚಿ ಸೋಮಶೇಖರಯ್ಯ, ಕೆ.ಎಸ್.ಸಿದ್ದಲಿಂಗಯ್ಯ, ಬಾಲರಾಜ್ ಆರ್., ಕವಿತಾ ಜಿ.ಎಸ್.ರೇಣುಕಾಪ್ರಸಾದ್, ರಮ್ಯಾ ರೇಣುಕಾರಾಧ್ಯ ಸೇರಿದಂತೆ ಸಂಘದ ನಿರ್ದೇಶಕರಾದ ಡಾ.ಸಿ.ರಾಜಶೇಖರನ್, ರಮೇಶ್‍ಗೌಡ, ಮುದ್ದುರಾಜಯ್ಯ, ಡಿ.ಸಿ.ನಾಗರಾಜ್, ಮಹದೇವಯ್ಯ, ಸುರೇಶ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಜೊತೆಗೆ ಡಾ.ಆರ್.ದೀಪಶ್ರೀ ಹಾಗೂ ಗಾಯಕ ಸಚಿನ್ ಎಸ್. ಅವರನ್ನು ಸನ್ಮಾನಿಸಲಾಗುವುದು. ಸಂಜೆ 4.30ಕ್ಕೆ ನಟರಾಜ್ ಶೆಟ್ಟಿಕೆರೆ ತಂಡದವರಿಂದ ವಚನ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ