ಯಾಜ್ಞ ಸೇನಿ ಸಿರಿ ಮುಡಿ ಪರಿಕ್ರಮಣಮು ಗ್ರಂಥ ಲೋಕಾರ್ಪಣೆ

Varta Mitra News

ಬೆಂಗಳೂರು,ಆ.29- ತೆಲುಗು ವಿಜ್ಞಾನ ಸಮಿತಿ ವತಿಯಿಂದ ಯಾಜ್ಞ ಸೇನಿ ಸಿರಿ ಮುಡಿ ಪರಿಕ್ರಮಣಮು(ತೆಲುಗು ಅನುವಾದ) ಗ್ರಂಥ ಲೋಕಾರ್ಪಣೆ ಸೆ.1ರಂದು ಸಂಜೆ 4ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಲೋಕಾರ್ಪಣೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ.ಚಂದ್ರಶೇಖರ ಕಂಬಾರ ನೆರವೇರಿಸಲಿದ್ದಾರೆ. ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ರಾಧಕೃಷ್ಣ ರಾಜು ಅಧ್ಯಕ್ಷತೆ, ಮಹಾಕಾವ್ಯದ ಕರ್ತೃ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪ ಮೊಯ್ಲಿ , ಕೆ.ಸಿ.ರಾಮಮೂರ್ತಿ, ಡಾ.ಶೇಷಶಾಸ್ತ್ರಿ ಮತ್ತಿತರರು ಭಾಗವಹಿಸುವರು.
ಮುಖ್ಯ ಅತಿಥಿಗಳಾಗಿ ತೆಲುಗು ಚಿತ್ರನಟ ಡಾ.ರಾಜೇಂದ್ರಪ್ರಸಾದ್ ಹಾಗೂ ಸಂಗೀತಕಟ್ಟಿ ಕುಲಕರ್ಣಿ ಅವರ ಸಂಗೀತ ಕಾರ್ಯಕ್ರಮ ನಡೆಯವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ