ಸರ್ಕಾರ ಪತನಕ್ಕೆ ಯಾವ ಷಡ್ಯಂತ್ರವಿಲ್ಲ: ಜಮೀರ್ ಅಹ್ಮದ

ಹುಬ್ಬಳ್ಳಿ: ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಬಿಳಿಸಲು ಯಾರು ಷಡ್ಯಂತ್ರ ಮಾಡುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ ಅಹ್ಮದ ಸ್ಪಷ್ಟ ಪಡಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಆಗಿದ್ದರಿಂದ ಹಾವೇರಿಗೆ ಪ್ರಚಾರಕ್ಕೆ ಬಂದಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಗೊಂದಲ ಉಂಟಾಗಿದೆ. ಅವರು ಮುಂದಿನ ಏಲೆಕ್ಷನ್ ನಲ್ಲಿ ಗೆದ್ದು ಸಿಎಮ್ ಆಗುತ್ತೆನೆ ಎಂದಿದ್ದಾರೆ. ಅವರೇನು ಕುಮಾರಸ್ವಾಮಿ ಸರ್ಕಾರ ಬಿಳಿಸಿ ಸಿಎಂ ಆಗ್ತಿನಿ ಅಂದಿಲ್ಲ ಎಂದರು. ಯಾವತ್ತಿದ್ದರು ಮಾಜಿ ಸಿ.ಎಂ. ಸಿದ್ದರಾಮಯ್ಯನವರೇ ನಮ್ಮ‌ ನಾಯಕರು ಎಂದ ಸಚಿವರು, ಅವರ ಯರೋಪ ಪ್ರವಾಸ ಪೂರ್ವ ನಿಗದಿಯದ್ದು, ಅದರೆಲ್ಲೆನು ವಿಶೇಷತೆ ಇಲ್ಲ ಎಂದರು. ಇನ್ನು ಅವರ ಜೊತೆ ಸಚಿವರು ಹೋಗೋ ವಿಚಾರವಾಗಿ ಮಾತನಾಡಿ, ಕರೆದರೆ ನಾನು ಹೋಗುತ್ತಿದ್ದೆ. ನನ್ನ ಕರೆದಿಲ್ಲ ಹೀಗಾಗಿ ನಾನು ಹೋಗುತ್ತಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ