ದಿವ್ಯಾಂಗರಿಗೆ ಜೈಪುರ ಕಾಲು, ಊರುಗೋಲು ವಿತರಣೆ

 

ಬೆಂಗಳೂರು,ಆ.25- ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿಯು ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಸೆ.2ರಿಂದ 4ರವರೆಗೆ ಕನಕಪುರ ರಸ್ತೆಯ ಆಯುರ್ವೇದ್ ಆಸ್ಪತ್ರೆಯಲ್ಲಿ ದಿವ್ಯಾಂಗರಿಗೆ ಜೈಪುರ ಕಾಲು, ಊರುಗೋಲು ಇತ್ಯಾದಿ ಉಪಕರಣಗಳ ವಿತರಣೆ ಹಾಗೂ ಅವುಗಳ ಬಳಕೆ ಬಗ್ಗೆ ಶಿಬಿರ ಆಯೋಜಿಸಲಾಗಿದೆ ಎಂದು ಡಾ.ರಮೇಶ್‍ಭಟ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ 800 ದಿವ್ಯಾಂಗರಿಗೆ ಉಚಿತ ಊರುಗೋಲು, ಚಕ್ರಗಂಡಿ, ಜೈಪುರ ಕಾಲು, ಕ್ಯಾಲಿಫರ್ ಇತ್ಯಾದಿ ಉಪಕರಣಗಳನ್ನು ನೀಡುವುದಾಗಿ ತಿಳಿಸಿದರು.
ಅವಶ್ಯಕತೆ ಉಳ್ಳವರು ಈ ಶಿಬಿರದಲ್ಲಿ ಭಾಗವಹಿಸಿ ಅವರಿಗೆ ತಕ್ಕಂತೆ ಉಪಕರಣಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಉಳಿದುಕೊಳ್ಳು ಹಾಗೂ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಅವರಿಗೆ ಬೇಕಾದ ಉಪಕರಣದ ಅಳತೆಯನ್ನು ತೆಗೆದುಕೊಂಡು ಅವುಗಳಿಗೆ ಟೈ ಮಾರ್ಗವನ್ನು ಅಳವಡಿಸಿ ಅವುಗಳನ್ನು ಬಳಸುವ ರೀತಿಯನ್ನು ಹೇಳಿಕೊಡಲಾಗುವುದು ಎಂದು ತಿಳಿಸಿದರು.
ಈ ಶಿಬಿರದಲ್ಲಿ ಎಸ್‍ಬಿಐ ಮ್ಯೂಚಲ್ ಫಂಡ್‍ನ ಎಂಡಿ ಮತ್ತು ಸಿಇಒ ಅನುರಾಧ ರಾವ್, ನಮ್ಮಿಯಾ ಕಾದಮ್ ಫಂಡ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ನವನೀತ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ