ಸಾಲಮನ್ನಾ ಹಣ ಕೊಡಗಿನ ಜನರಿಗೆ

 

ಬೆಂಗಳೂರು,ಆ.22- ರೈತರ ಸಾಲ ಮನ್ನಾ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರು ತಮ್ಮ ಸಾಲಮನ್ನಾ ಹಣವನ್ನು ಕೊಡಗಿನ ಜನರ ಪುನರ್ವಸತಿಗೆ ಬಳಕೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳ ಪರಿಹಾರ ನಿಗೆ ನೀಡುವಂತೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಸುಮಾರು1083ಕ್ಕೂ ಅಕ ಜಿಲ್ಲಾಪಂಚಾಯಿ ಹಾಗೂ 3799ಕ್ಕೂ ಅಕ ಗ್ರಾಮ ಪಂಚಾಯ್ತಿ ಸದಸ್ಯರಿದ್ದು ಈ ಜನಪ್ರತಿನಿಗಳೇನಾದರೂ ರೈತ ಸಾಲ ಮನ್ನಾ ಯೊಜನೆ ವ್ಯಾಪ್ತಿಗೆ ಒಳಪಟ್ಟಿದ್ದರೆ ಅಂಥವರು ದಯವಿಟ್ಟು ಆ ಹಣವನ್ನು ಕೊಡಗಿನ ಸಂತ್ರಸ್ತರಿಗೆ ವಿನಿಯೋಗಿಸಿ ಎಂದು ಕೋರಿದ್ದಾರೆ.
ಈ ಶುಭ ಕಾರ್ಯಕ್ಕೆ ತಾವೇ ಮುಂದಾಗಿ ಸಾಲಮನ್ನಾ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಗೆ ನೀಡುತ್ತಿದ್ದು ನೀವು ಕೈ ಜೋಡಿಸಿ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ