ವಿಮಾ ಹಾಗೂ ಪ್ರಮುಖ ಕಂಪನಿಗಳಿಂದ ನೆರವಿನ ಮಹಾಪೂರ…!

ಕೊಚ್ಚಿನ್​: ಕೇರಳದ ಪ್ರವಾಹ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 1 ಸಾವಿರ ಕೋಟಿ ರೂ. ಮೊತ್ತದ ಪ್ರೀಮಿಯಂ ಕಟ್ಟಬೇಕಾಗುತ್ತದೆ ಎಂದು ವಿಮಾ ಕಂಪನಿಳು ಲೆಕ್ಕ ಹಾಕಿವೆ.

ಈ ನಡುವೆ ಕೇರಳದ ಮಹಾ ವಿಪತ್ತಿನಲ್ಲಿ ಅಪಾರ ಸಾವು ನೋವು, ನಷ್ಟಗಳಾಗಿರುವುದರಿಂದ ಇನ್ನೊಂದೆರಡ್ಮೂರು ದಿನಗಳಲ್ಲಿ ಪರಿಹಾರ ನೀಡಲು ಆರಂಭಿಸಲಾಗುವುದು ಎಂದು ವಿಮಾ ಕಂಪನಿಗಳು ಹೇಳಿವೆ.
ಈ ಸಂಬಂಧದ ಅರ್ಜಿಗಳನ್ನ ನಾಲ್ಕೈದು ದಿನಗಳಲ್ಲಿ ಸಲ್ಲಿಕೆ ಮಾಡಲಾಗುವುದು ಹಾಗೂ ಆ ಬಳಿಕ ವಿಮಾ ಕಂಪನಿಗಳು ಎಷ್ಟು ಪ್ರಮಾಣದ ಪರಿಹಾರ ನೀಡಬೇಕಾಗುತ್ತದೆ ಎಂಬ ಅಂದಾಜು ಸಿಗಲಿದೆ ಎಂದು ಒರಿಯಂಟಲ್​ ಇನ್ಶೂರೆನ್ಸ್​ ಕಂಪನಿಯ ಚೇರ್ಮನ್​ ಎಂಡಿ ಎ.ವಿ. ಗಿರಿರಾಜ್​ ಕುಮಾರ್​ ಹೇಳಿದ್ದಾರೆ.
ಆಟೋ ಬಜಾಜ್:   ಮಾರುತಿ ಕಂಪನಿ ಈಗಾಗಲೇ ಕೇರಳದ ನಿರಾಶ್ರಿತರಿಗೆ 2 ಕೋಟಿ ರೂ. ಪರಿಹಾರ ಘೋಷಿಸಿದೆ. ಕೇರಳ ಸಿಎಂ ಪರಿಹಾರ ನಿಧಿಗೆ ಚೆಕ್​ ಹಸ್ತಾಂತರಿಸಿದೆ.  ಇನ್ನು ಜುಂಕಿ ದೇವಿ ಬಜಾಜ್​ ಗ್ರಾಮ ವಿಕಾಸ ಕಂಪನಿ 1 ಕೋಟಿ ರೂ. ನೀಡಿದೆ. ಮಾರುತಿ ಸುಜೂಕಿ ಸಹ 2 ಕೋಟಿ ರೂ. ಪರಿಹಾರ ನಿಧಿಯನ್ನ ನೀಡಿದ್ದಲ್ಲದೇ ಹೆಚ್ಚುವರಿ 1.5 ಕೋಟಿ ಅನುದಾನವನ್ನೂ ಒದಗಿಸಿದೆ.
ಸ್ಟಾರ್​ ಇಂಡಿಯಾ ಕಂಪನಿ ಸಹ ಕೇರಳ ನಿರಾಶ್ರಿತರಿಗೆ ಹಣ ನೀಡುವಂತೆ ಆಸ್ಸೋಂ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ. ನೀಡಿದೆ.  ಈ ಬಗ್ಗೆ ಮಾತನಾಡಿರುವ ದಕ್ಷಿಣ ಭಾರತೀಯ ಮ್ಯಾನೇಜರ್​ ಕೆ ಮಾಧವನ್​​ ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಚೆಕ್​ ಹಸ್ತಾಂತರಿಸಿದರು.
ಹೀರಾಗ್ರೂಪ್​  ಸಹ ಕೇರಳದ ಜನರ ನೆರವಿಗೆ ನಿಂತಿದೆ.. ಕೋಟಿ ರೂ. ಚೆಕ್​ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಬಿಸ್ಕಟ್​, 100 ಟನ್​  ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ