ನಾಲ್ಕು ತಿಂಗಳ ಅಸುಗೂಸನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ

 

ಚಿಕ್ಕಬಳ್ಳಾಪುರ,ಆ.12- ನಾಲ್ಕು ತಿಂಗಳ ಅಸುಗೂಸನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಚ್ಚೆನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಗ್ರಾಮದ ರೀತು(24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ವಿವಾಹದ ಹೊಸತರಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಇತ್ತೀಚೆಗೆ ಬಿರುಕು ಕಾಣಿಸಿಕೊಂಡಿತ್ತು. ವಿನಾಕಾರಣ ಜಗಳ ತೆಗೆದು ಹೆಂಡತಿ ರೀತುಗೆ ಹಿಂಸೆ ಕೊಡುತ್ತಿದ್ದಪತಿಯ ವರ್ತನೆಯಿಂದ ಬೇಸತ್ತ ಪತ್ನಿ ರೀತು ತನ್ನ ನಾಲ್ಕು ತಿಂಗಳ ಕಂದಮ್ಮನನ್ನು ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಟ್ಟೆ ವ್ಯಾಪಾರ ಮಾಡುತ್ತಿದ್ದ ಪತಿ ಚಂದನ್ ಸಿಂಗ್‍ನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನೂ ಅರಿಯದ ಕಂದಮ್ಮನ ರೋಧನ ಅಲ್ಲಿ ನೆರೆದಿದ್ದವರ ಕರುಳು ಹಿಂಡುವಂತಿತ್ತು. ಅಮ್ಮನ ಹಾಲಿಗಾಗಿ ಹಾತೊರೆದು ಅಳತ್ತಿದ್ದ ಮಗುವನ್ನು ಕಂಡು ಎಲ್ಲರೂ ಮೊಮ್ಮಲ ಮರುಗಿದರು.
ಮಂಚೇನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ