ನಾ ಕಂಡಂತೆ “ಕತ್ತಲೆಕೋಣೆ

Varta Mitra News

ನಾ ಕಂಡಂತೆ “ಕತ್ತಲೆಕೋಣೆ”

ಪತ್ರಕರ್ತ ಸಂದೇಶ್ ಶೆಟ್ಟಿ ಅಜ್ರಿಯವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದ ನೈಜ ಘಟನೆಯಾದಾರಿತ ಕತ್ತಲೆಕೋಣೆ ಸಿನಿಮಾದಲ್ಲಿ ನಮಗಾರಿಗೂ ಕಾಣದ ಕತ್ತಲ ಜಗತ್ತಿನ ಕರಾಳ ಮುಖಗಳನ್ನು ಪರಿಚಯಿಸುವ ಪ್ರಯತ್ನವನ್ನಿಲ್ಲಿ ಮಾಡುವುದರ ಜೊತೆಗೆ ಪತ್ರಿಕೋದ್ಯಮದ ಇನ್ನೊಂದು ಕರಾಳ ಮುಖವನ್ನು ನಮ್ಮ ಮುಂದೆ ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ…

ಒಂದೆಡೆ ಮಾಫಿಯಾದ ಕ್ರೂರ ಜಗತ್ತು, ಇನ್ನೊಂದೆಡೆ ತಂದೆ ತಾಯಿಯ ವಿರೋಧ ಕಟ್ಟಿಕೊಂಡು ಸೈನಿಕನಾಗುವ ಕನಸು ಹೊತ್ತು ಹುಚ್ಚನಂತಾಡುವ ಸ್ಯಾಂಡಿ ಎಂಬ ಹುಡುಗನ ವಿಚಿತ್ರ ಪಾಡು. ಆತನ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರೂರ ಪ್ರಪಂಚವನ್ನು ಚಿತ್ರ ಎಳೆ ಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ. ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ದೇಶನ ಮಾಡಿರುವ ಸಂದೇಶ್ ಅವರು ಚಿತ್ರದಲ್ಲಿ ಪತ್ರಿಕೆಯೊಂದರ ಸಂಪಾದಕರಾಗಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದುದ್ದಕ್ಕೂ ಕತ್ತಲೆಕೋಣೆಯ ರಹಸ್ಯ ಬೇದಿಸುತ್ತ ಸಾಗುತ್ತಾರೆ.
ನಾಯಕ ಸಂದೇಶ್ ಗೆ ಜೊತೆಯಾಗಿ ಹೆನಿಕಾ ರಾವ್ ನಟಿಸಿದ್ದು ಪತ್ರಿಕಾ ವರದಿಯಗಾರ ಪಾತ್ರದಾರಿ ಸುನಿಲ್ ಉಪ್ಪುಂದ ತಂಗಿಯಾಗಿ, ನಾಯಕನಿಗೆ ಕತ್ತಲಕೋಣೆಯ ರಹಸ್ಯಗಳ ಸುಳಿವು ನೀಡುತ್ತ ನಾಯಕನೊಂದಿಗೆ ಡ್ಯೂಯೆಟ್ ಹಾಡುತ್ತಾರೆ. ಸೈಕೊ ಸ್ಯಾಂಡಿಯ ಪಾತೃದಲ್ಲಿ ‘ವೈಶಾಖ್ ಅಮಿನ್’ರವರ ಮನೋಜ್ಞ ಅಭಿನಯ ಪ್ರೇಕ್ಷಕರ ಗಮನ ಸೇಳೆಯುತ್ತದೆ. ಅಲ್ಲದೆ ಸೈನಿಕರ ವಿರುದ್ಧ ಮಾತಾಡುವವರು, ದೇಶ ದ್ರೋಹದ ಮಾತನಾಡುವವರು ಸ್ವಂತ ತಂದೆ ತಾಯಿಯಾದರು ಸರಿಯೇ ಅವರನ್ನು ಕೊಂದೇ ಬಿಡಬೇಕು ಎನುತ್ತ ಸೈನಿಕರ ಕುರಿತು ತುಚ್ಚವಾಗಿ ಮಾತನಾಡುವ ತಂದೆಯತ್ತ ಬಂದುಕಿನ ಗುರಿ ಇಡುವ ಸ್ಯಾಂಡಿಯ ಡೈಲಾಗ್ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಮಾಧಕ ವ್ಯಸನಿ ಸೈಕೊ ಸ್ಯಾಂಡಿಯ ಪಾತ್ರ ಚಿತ್ರ ಮುಗಿಸಿ ಹೊರಬಂದ ಮೇಲು ಕಾಡುತ್ತದೆ. ಹಾಗೂ ಚಿತ್ರದಲ್ಲಿ ಆತನ ಜೊತೆಗಾರ ಸ್ನೇಹಿತನ ಕಾಮಿಡಿ ಅಭಿನಯ ಕೂಡ ಸಾಕಷ್ಟು ಗಮನ ಸೆಳೆಯುತ್ತದೆ.
ಅಲ್ಲದೆ ಪತ್ರಕರ್ತ ಅಶ್ವತ್ ಆಚಾರ್ಯ ಎಡಬೆಟ್ಟು ಮಾಫಿಯಾ ಜಗತ್ತಿನೊಂದಿಗೆ ಕೈ ಜೋಡಿಸುವ ಭೃಷ್ಟ ಪೋಲಿಸ್ ಠಾಣಾಧಿಕಾರಿಯ ಪಾತೃದಲ್ಲಿ ಕಾಣಿಸಿಕೊಂಡಿದ್ದು ಖಡಕ್ಕಾಗಿ ಅಭಿನಯಿಸಿದ್ದಾರೆ.
ಅಲ್ಲದೆ ಹೀರೊ ಗೆಟಪ್ನಲ್ಲಿ ಒಂದು ಹಾಡಿನ ಮೂಲಕ ಸಿ.ಬಿ.ಐ ಪಾತ್ರಧಾರಿಯಾಗಿ ಹೃತಿಕ್ ಮುರ್ಡೇಶ್ವರ್ ಎಂಟ್ರಿ ಕತೆಗೊಂದು ತಿರುವು ಕೊಡುತ್ತದೆ. ಜೊತೆಗೆ ಚಿತ್ರದ ಇಂಟರ್ವಲ್ ತನಕ ನಮ್ಮ ಕುಂದಗನ್ನಡದ ಖ್ಯಾತ ಹಾಸ್ಯ ನಟರಾದ ರಘು ಪಾಂಡೇಶ್ವರ್ ಅವರ ಕಾಮಿಡಿ ಚಿತ್ರದ ಗಂಭೀರ ಸನ್ನಿವೇಶಗಳ ನಡುವೆಯೂ ಪ್ರೇಕ್ಷಕರನ್ನು ನಗಿಸುತ್ತಾರೆ.‌ ಮೆಹಬೂಬ್ ಸಾಬ್ ಹಾಡಿರುವ ಒಂಟಿ ಕಾನನದಿ ಹಾಡು ಹಾಗೂ ಅದರ ಸುಂದರ ಸಾಹಿತ್ಯ ಅದ್ಭುತ. ಅಲ್ಲದೆ “ಕಾಡುತಿಹೆ…” ನಾಯಕ ನಾಯಕಿಯ ರೊಮ್ಯಾಂಟಿಕ್ ಸಾಂಗ್ ಚಿತ್ರಮಂದಿರದಿಂದ ಹೊರ ಬಂದ ಮೇಲೆ ಮತ್ತೆ ಮತ್ತೆ ಗುನುಗಿಸುತ್ತದೆ. ಇದು ಹೊಸಬರ ತಂಡವಾದರು ಚಿತ್ರದಲ್ಲಿ ಕೂಡ ಅಭಿನಯಿಸಿದ ಎಲ್ಲಾ ನಟರು ಕೂಡ ಯಾವ ಅನುಭವಿ ನಟರಿಗೂ ಕಡಿಮೆ ಇಲ್ಲದಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದು ಚಿತ್ರದ ಪ್ರತಿಯೊಂದು ಪಾತ್ರಗಳು ಕೂಡ ನೆನಪಿನಲ್ಲುಳಿಯುವಂತದ್ದು. ಚಿತ್ರ ಪ್ರೇಕ್ಷಕನಿಗೆ ಯಾವುದೇ ರೀತಿ ಬೋರಿಂಗ್ ಆಗದಂತೆ ಕತೆ ಕೊನೆಯವರೆಗೂ ಕುತೂಹಲ ಕಾದಿರಿಸಿಕೊಂಡು ಸಾಗುತ್ತದೆ.
ಈ ನಿಟ್ಟಿನಲ್ಲಿ ನಿರ್ದೇಶಕ, ನಟ ಸಂದೇಶ್ ಶೆಟ್ಟಿ ಅಜ್ರಿ ನಟನಾಗಿ ನಿರ್ದೇಶಕನಾಗಿ ಈ ಎರಡು ರಂಗದಲ್ಲೂ ಕೂಡ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದ ಕೊನೆಯಲ್ಲಿ ಎಲ್ಲ ಪಾತೃಗಳು ಪ್ರಶ್ನೆಗಳಾಗಿ ಉಳಿದು ಹೊದರು ಅದಕ್ಕೆ ಉತ್ತರಕ್ಕಾಗಿ ಕತ್ತಲೆಕೋಣೆಯ ಮುಂದಿನ ಬಾಗಿಲು ತೆರೆಯುವವರೆಗೆ(ಕತ್ತಲೆಕೋಣೆಯ 2ನೇ ಬಾಗ) ಕಾಯಲೆ ಬೇಕು. ಜೊತೆಗೆ ಕತ್ತಲೆಕೋಣೆಯ ರಹಸ್ಯವೇನು. ಕತ್ತಲೆಕೋಣೆಯಲ್ಲಂತದ್ದೇನಿದೆ ಎಂದು ತಿಳಿಯಲು ಒಮ್ಮೆ ನೀವು ಚಿತ್ರದಲ್ಲಿ ಒಂದಷ್ಟು ಮನರಂಜನೆಯ ಜೊತೆಗೆ ಹಳ್ಳಿಯ ಮುಗ್ದ ಜನರನ್ನು ಈ ಮಾಫಿಯಾ ಜಗತ್ತು ಹೇಗೆ ಬಲಿತೆಗೆದುಕೊಳ್ಳುತ್ತದೆ ಎನ್ನುವ ಸಮಾಜಿ ಕಾಳಜಿಯ ಸಂದೇಶವನ್ನು ನೋಡಬಹುದು…

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ