ಪತ್ನಿಯ ಅಕ್ರಮ ಸಂಬಂಧದಿಂದ ರೋಸಿಹೋಗಿದ್ದ ಪತಿ, ಚಾಕುವಿನಿಂದ ಪತ್ನಿ ಹಾಗೂ ಪ್ರಿಯಕರನಿಗೆ ಮನಬಂದಂತೆ ಇರಿದು ಪೆÇಲೀಸರಿಗೆ ಶರಣಾ………

ತುಮಕೂರು, ಆ.8- ಪತ್ನಿಯ ಅಕ್ರಮ ಸಂಬಂಧದಿಂದ ರೋಸಿಹೋಗಿದ್ದ ಪತಿ, ಚಾಕುವಿನಿಂದ ಪತ್ನಿ ಹಾಗೂ ಪ್ರಿಯಕರನಿಗೆ ಮನಬಂದಂತೆ ಇರಿದು ಪೆÇಲೀಸರಿಗೆ ಶರಣಾಗಿರುವ ಘಟನೆ ಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಉಪ್ಪಾರಹಳ್ಳಿಯ ಮೂಕಾಂಬಿಕ ನಗರದ 2ನೇ ಕ್ರಾಸ್‍ನ ನಿವಾಸಿ ರಾಜರಾಮ್ ಎಂಬುವರ ಪತ್ನಿ ವಿನು(32) ಮತ್ತು ಪ್ರಿಯಕರ ಮೊಹಮ್ಮದ್ ನಯಾಜ್(28) ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾರ್‍ಬೆಂಡಿಂಗ್ ಕೆಲಸ ಮಾಡುವ ರಾಜರಾಮ್ ರಾತ್ರಿ 8.45ರಲ್ಲಿ ಮನೆಗೆ ವಾಪಸ್ಸಾದಾಗ ಪತ್ನಿ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕ ವಿಚಾರಿಸಿದಾಗ ನಯಾಜ್ ಜೊತೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಷಯ ಕೇಳಿ ಮತ್ತಷ್ಟು ರೋಸಿಹೋದ ರಾಜರಾಮ್ ಚಾಕುವನ್ನು ತೆಗೆದುಕೊಂಡು ನಯಾಜ್ ಮನೆಗೆ ಹೋಗಿದ್ದು, ಅಲ್ಲಿ ಇವರಿಬ್ಬರು ಇರುವುದನ್ನು ಗಮನಿಸಿ ಚಾಕುವಿನಿಂದ ಮನಸೋ ಇಚ್ಛೆ ಕುತ್ತಿಗೆ, ಹೊಟ್ಟೆ, ಇನ್ನಿತರ ಭಾಗಗಳಿಗೆ ಇರಿದು ನಂತರ ಠಾಣೆಗೆ ಹೋಗಿ ಪೆÇಲೀಸರಿಗೆ ಶರಣಾಗಿ ನಡೆದ ವಿಷಯವನ್ನು ತಿಳಿಸಿದ್ದಾನೆ.
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಇವರಿಬ್ಬರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ.
ಸುದ್ದಿ ತಿಳಿದ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ, ಡಿವೈಎಸ್ಪಿ ನಾಗರಾಜ್, ತಿಲಕ್‍ಪಾರ್ಕ್ ವೃತ್ತ ನಿರೀಕ್ಷಕ ರಾಧಾಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಯನಗರ ಪೆÇಲೀಸ್ ಠಾಣೆ ಸಬ್‍ಇನ್‍ಸ್ಪೆಕ್ಟರ್ ನವೀನ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ