ಗೋಹತ್ಯೆ ಭಯೋತ್ಪಾದನೆಗಿಂತ ಅತಿ ದೊಡ್ಡ ಅಪರಾಧ: ರಾಜಸ್ತಾನ ಬಿಜೆಪಿ ಶಾಸಕ

ರಾಜಸ್ತಾನ: ಒಂದು ಹಸುವನ್ನು ಕೊಂದಾಗ  ಕೋಟ್ಯಾಂತರ ಹಿಂದೂಗಳ ಮನಸ್ಸಿಗೆ ನೋವಾಗುತ್ತದೆ, ಹೀಗಾಗಿ ಗೋಹತ್ಯೆ ಭಯೋತ್ಪಾದನೆಗಿಂತಲೂ ಅತಿದೊಡ್ಡ ಅಪರಾಧ ಎಂದು ರಾಜಸ್ತಾನ ಬಿಜೆಪಿ ಶಾಸಕ ಗ್ಯಾನ್ ದೇವ್ ತಿಳಿಸಿದ್ದಾರೆ,
ಭಯೋತ್ಪಾಕರು ಒಬ್ಬರು ಅಥವಾ ಇಬ್ಬರನ್ನು ಕೊಲ್ಲುತ್ತಾರೆ, ಆದರೆ ಒಂದು ಹಸವನ್ನು ಕೊಂದಾಗ ಕೋಟ್ಯಾಂತರ  ಹಿಂದೂಗಳ ಮನಸ್ಸಿಗೆ ಘಾಸಿಯಾಗುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಜಸ್ತಾನದಲ್ಲಿ  ಗೋ ಸಂರಕ್ಷಕರಿಂದ ಮುಸ್ಲಿಮ್ ವ್ಯಕ್ತಿಯ.ಮೇಲೆ ಹಲ್ಲೆ ನಡೆದಿತ್ತು.  ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಎಂಬ ಶಂಕೆಯ ಮೇಲೆ ತನ ಮೇಲೆ ಹಲ್ಲೆ ನಡೆಸಲಾಗಿತ್ತು,.
ಇನ್ನೂ ಈ ಸಂಬಂಧ ಲೋಕಸಭೆಯಲ್ಲಿ ಮಾತನಾಡಿದ್ದ  ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯಗಳು ಹಲೆಲ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ