ಎಟಿಎಂನಲ್ಲಿ ಹಣ ದೋಚಲು ಕಳ್ಳರ ವಿಫಲ ಯತ್ನ

ನೆಲಮಂಗಲ, ಜು.26- ಠಾಣೆಗೆ ಸಮೀಪದಲ್ಲೇ ಇರುವ ಎಟಿಎಂನಲ್ಲಿ ಹಣ ದೋಚಲು ಕಳ್ಳರು ವಿಫಲ ಯತ್ನ ನಡೆಸಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂ.ಉತ್ತರ ತಾಲೂಕು ಮಾದನಾಯಕನಹಳ್ಳಿಯ ಎಸ್‍ಬಿಐಗೆ ಸೇರಿದ ಎಟಿಎಂನ್ನು ದೋಚಲು ಮಧ್ಯರಾತ್ರಿ ಕಳ್ಳರು ಬಂದು ಎಟಿಎಂ ಮಿಷನ್ ಕೆಳಭಾಗದ ಶೀಟ್‍ನ್ನು ಮುರಿದಿದ್ದಾರೆ.
ಈ ವೇಳೆ ಭಾರೀ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ 6.30ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ಮಾದನಾಯಕನಹಳ್ಳಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸ್ಥಳದಲ್ಲಿನ ಸಿಸಿ ಟಿವಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ