ಲಂಡನ್ ಬಹುಮಾನದ ಆಸೆ ತೋರಿಸಿ ವಂಚನೆ

Varta Mitra News

ಕೆಜಿಎಫ್, ಜು.23- ಲಂಡನ್‍ನಿಂದ ಬಹುಮಾನ ಬಂದಿದೆ ಅದಕ್ಕೆ ನೀವು ಹಣ ಪಾವತಿಸಬೇಕು ಎಂದು ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ಹಣ ವಂಚಿಸಿರುವ ಘಟನೆ ಆಂಡ್ರಸನ್‍ಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜಪೇಟೆ ಬಡಾವಣೆ ನಿವಾಸಿ ಸ್ವಾಮಿನಾಥನ್ ಎಂಬುವರ ಪತ್ನಿ ಗಿರಿಜಾ ರವರ ಮೊಬೈಲ್‍ಗೆ ಕರೆ ಮಾಡಿ ನಿಮಗೆ ಲಂಡನ್ ನಿಂದ ಬಹುಮಾನ ಪಾರ್ಸೆಲ್ ಬಂದಿದೆ ಎಂದು ನಂಬಿಸಿ ಕಳೆದ ಫೆ.19 ರಿಂದ ಮಾ.7 ರ ವರೆಗೆ ಆಗಾಗ ಕರೆ ಮಾಡಿ ಸುಮಾರು 16.45 ಲಕ್ಷ ಹಣವನ್ನು ಖಾತೆಗೆ ಜಮಾ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಸ್ವಾಮಿನಾಥನ್ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ