ಗೋ ಕಳ್ಳಸಾಗಣೆ ಶಂಕೆ: ಯುವಕನ ಹತ್ಯೆ

ನವದೆಹಲಿ, ಜು.23-ರಾಜಸ್ತಾನದ ಅಲ್ವರ್‍ನಲ್ಲಿ ಗೋ ಕಳ್ಳಸಾಗಣೆ ಶಂಕೆಯಿಂದ ಗ್ರಾಮಸ್ಥರಿಂದ ಯುವಕನೊಬ್ಬ ಹತ್ಯೆಯಾದ ಪ್ರಕರಣವನ್ನು ಕಟುವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದು ಪ್ರಧಾನಿ ನರೇಂದ್ರ ಮೋದಿ ಅವರ ಕ್ರೂರ ನವಭಾರತದ ನಿದರ್ಶನ ಎಂದು ಆರೋಪಿಸಿದ್ದಾರೆ.
ಈ ಹತ್ಯೆಗೆ ಟ್ವಿಟರ್‍ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯದ ವೈಫಲ್ಯವನ್ನು ಖಂಡಿಸಿದರು.
ಗ್ರಾಮಸ್ಥರಿಂದ ತೀವ್ರ ಥಳಿತಕ್ಕೆ ಒಳಗಾದ ಯುವಕನ್ನು 6 ಕಿ.ಮೀ.ದೂರದಲ್ಲಿರುವ ಆಸ್ಪತ್ರೆಗೆ ಸೇರಿಸಲು ಅಲ್ಲಿನ ಪೆÇಲೀಸರಿಗೆ ಮೂರು ತಾಸುಗಳು ಬೇಕಾಯಿತು. ಇದು ರಾಜಸ್ತಾನ ಪೆÇಲೀಸರ ವೈಫಲ್ಯಕ್ಕೆ ಸಾಕ್ಷಿ ಎಂದು ಅವರು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ