ಕೆಸರಲ್ಲಿ ಉರುಳಾಡಿ ಪ್ರತಿಭಟನೆ

ಹುಬ್ಬಳ್ಳಿ- ಸಿ.ಎಂ. ನಿವಾಸಕ್ಕೆ ಕಲ್ಪಿಸುವ ರಸ್ತೆ ಮಾರ್ಗವು ಸಂಪೂರ್ಣ ಹಾಳಾಗಿದ್ದು, ರಸ್ತೆಯು ಚರಂಡಿಯಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಕಾರ್ಯಮಾಡುವಂತೆ ವತ್ತಾಯಿಸಿದ ಸ್ಥಳೀಯರು ಮೈಗೆ ಕೆಸರು ಬಳಿಯು ಮೂಲಕ ಪ್ರತಿಭಟನೆ ಮಾಡಿದ್ರು. ಹುಬ್ಬಳ್ಳಿಯ ಬೈರಿದೆವರಕೊಪ್ಪದಲ್ಲಿರುವ, ಸಿ.ಎಂ. ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳುವ ರಸ್ತೆ ಹಾಳಾಗಿದೆ. ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಮುಖ್ಯಮಂತ್ರಿಗಳ ಮನೆಗೆ ಕಲ್ಪಿಸುವ ರಸ್ತೆಯೇ ಹಾಲಾಗಿದೆ ಎಂದರೆ ನಾಚಿಕೆ ಗೇಡಿನ ಸಂಗತಿ ಎಂದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರ ಬೈರಿದೆವರಕೊಪ್ಪ ಪ್ರದೇಶ ಇದಾಗಿದ್ದು, ರಸ್ತೆ ದುರಸ್ತಿ ಮಾಡಿಸುವಂತೆ ಅಂಗಲಾಚಿ ಬೇಡಿಕೊಂಡರು ಯಾರೊಬ್ಬರು, ಇತ್ತ ಕಡೆ ಗಮನ ಹರಿಸಿಲ್ಲ. ಇಬ್ಬರು ಘಟಾನುಗಟಿ‌ ನಾಯಕರಿದ್ದರು ರಸ್ತೆ ಮಾತ್ರ ಕೊಳಚೆಂತಾಗಿದೆ ಎಂದು ರಸ್ತೆ ಮೇಲೆ ಹೊರಳಾಡಿ ವಿನೂತನ ಪ್ರತಿಭಟನೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ