ಕಳಸಾ ಹೋರಾಟಕ್ಕೆ ನಾಲ್ಕು ವರ್ಷ

ಉತ್ತರ ಕರ್ನಾಟಕ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ಮಹಾದಾಯಿ ಹೋರಾಟ ಈಗಾಗಲೇ ಮೂರು ವರ್ಷ ಪೂರೈಸಿ ನಾಲ್ಕನೆ ವರ್ಷಕ್ಕೆ ಕಾಲಿಟ್ಟಿದೆ. ಹೋರಾಟ ಮಾತ್ರ ನಿರಂತರ ಮುಂದುವರೆದಿದ್ದು ಆದರೆ ರೈತನ ಸಮಸ್ಯೆ ಈವರೆಗೂ ಬಗೆಹರಿದಿಲ್ಲ.ಇದರ ಬೆನ್ನಲ್ಲೆ ಇಂದು ರೈತ ಬಂಡಾಯದ 38ನೇ ವರ್ಷಾಚರಣೆ ಹಿನ್ನಲೆಯಲ್ಲಿ ಗದಗ ನಗರದಲ್ಲಿ ಮಹಾದಾಯಿ ಹೋರಾಟಗಾರರು ದೀರ್ಘದಂಡ ಪ್ರದಕ್ಷಿಣಿ ಹಾಕಿದ್ರು. ಈ ಮೂಲಕ ಕಳಸಾ ಬಂಡೂರಿ ಮಹಾದಾಯಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ರು.ನಗರದ ಭೂಮರೆಡ್ಡಿ ವೃತ್ತದಿಂದ ವೀರೇಶ್ವರ ಪುಣ್ಯಾಶ್ರಮದವರೆಗೂ ದೀಡ ನಮಸ್ಕಾರ ಹಾಕಿದ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ರೈತ ಬಂಡಾಯ ಆಚರಣೆ ಹಾಗೂ ಕಳಸಾ ಬಂಡೂರಿ ಜಾರಿಗೆ ಒತ್ತಾಯಿಸಿ ಹೋರಾಟಗಾರರು ದೀಡ ನಮಸ್ಕಾರ ಕೈಗೊಂಡಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ