ಆ.11ರಿಂದ 6 ದಿನಗಳ ಕಾಲ ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನ ಬಂದ್!

ಹೈದರಾಬಾದ್, ಜು.17- ಸಂಪೆÇ್ರೀ ಕೈಂಕರ್ಯ ನೆರವೇರಿಸುವ ಉದ್ದೇಶದಿಂದ ಆ.11ರಿಂದ 6 ದಿನಗಳ ಕಾಲ ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನ ಮುಚ್ಚುವ ಟಿಟಿಡಿ ನಿರ್ಧಾರಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪೆÇ್ರೀ ಹೆಸರಿನಲ್ಲಿ ಭಕ್ತರಿಗೆ ಯಾವುದೇ ಕಾರಣಕ್ಕೂ ತೊಂದರೆ ನೀಡುವುದು ಬೇಡ. ದೇವಸ್ಥಾನವನ್ನು ಮುಚ್ಚದೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವಂತೆ ಅವರು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.
ಆಗಮ ಶಾಸ್ತ್ರದ ಪ್ರಕಾರ ಸಂಪೆÇ್ರೀ ಕೈಂಕರ್ಯ ನೆರವೇರಿಸಬೇಕು. ಭಕ್ತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ದೂರದ ಪ್ರದೇಶಗಳಿಂದ ವೆಂಕಟೇಶ್ವರನ ದರ್ಶನಕ್ಕೆ ಸಹಸ್ರಾರು ಮಂದಿ ಆಗಮಿಸುತ್ತಾರೆ. ಅವರಿಗೆ ಸಂಪೆÇ್ರೀ ಕೈಂಕರ್ಯದಿಂದ ತೊಂದರೆಯಾಗುವುದು ಬೇಡ ಎಂದು ಅವರು ಸಲಹೆ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ