ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್(73) ನಿಧನ

 

ಬೆಂಗಳೂರು, ಜು.15-ಕ”, ಕಾದಂಬರಿಕಾರ ಮತ್ತು ಖ್ಯಾತ ಚಿತ್ರ ರಚನೆಕಾರ ಎಂ.ಎನ್.ವ್ಯಾಸರಾವ್(73) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಅವರು ಪತ್ನಿ, ಓರ್ವ ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಇವರು ಕನ್ನಡ ಸಾ”ತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಕಥೆ, ಕಾದಂಬರಿ ಮತ್ತು ಗೀತರಚನೆ ಸೇರಿದಂತೆ “”ಧ ಪ್ರಾಕಾರಗಳ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಗೀತರಚನೆ ಮಾಡಿರುವ ಇವರು, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶುಭಮಂಗಳ ಚಿತ್ರದ ನಾಲ್ಕೊಂದು ನಾಲ್ಕು ಹಾಗೂ ಸೂರ್ಯಂಗೂ, ಚಂದ್ರಗೂ… ಎಂಬ ಜನಪ್ರಿಯ ಹಾಡಿನ ಕರ್ತೃ.
ದಿಗ್ದರ್ಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಬಹುತೇಕ ಎಲ್ಲಾ ಚಿತ್ರಗಳಿಗೆ ಗೀತೆಗಳನ್ನು ರಚಿಸಿರುವ ವ್ಯಾಸರಾವ್ ಹಲವಾರು ಸಿನಿಮಾಗಳಿಗೆ ಜನಪ್ರಿಯ ಹಾಡುಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
35ಕ್ಕೂ ಹೆಚ್ಚು ಜನಪ್ರಿಯ ಧಾರಾವಾ”ಗಳಿಗೆ ಹಾಗೂ 15ಕ್ಕೂ ಹೆಚ್ಚು ಕ್ಯಾಸೆಟ್‍ಗಳಿಗೆ ಹಾಡು ರಚಿಸಿದ್ದಾರೆ.
ಸಾ”ತ್ಯ ಅಕಾಡೆ”ು ಪ್ರಶಸ್ತಿ ಸೇರಿದಂತೆ ಕೆಂಪೇಗೌಡ, ಆರ್ಯಭಟ ಪ್ರಶಸ್ತಿ, ಮಳೆಯಲ್ಲಿ ನೆನೆದ ಮರಗಳು ಎಂಬ ಸಣ್ಣಕತೆಗೆ ಕರ್ನಾಟಕ ರಾಜ್ಯ ಸಾ”ತ್ಯ ಅಕಾಡೆ”ು ಪ್ರಶಸ್ತಿಗಳನ್ನು ಪಡೆದಿದ್ದರು. ಮೈಸೂರಿನಲ್ಲಿ ಜನವರಿ 27, 1945ರಲ್ಲಿ ಜನಿಸಿದ್ದರು. ಅಲ್ಲಿಯೇ ಪ್ರಾಥ”ುಕ ಶಿಕ್ಷಣ ಪಡೆದು ಬೆಂಗಳೂರಿನ “”ಯಲ್ಲಿ ಬಿ.ಎ. ಪದ” ಪೂರೈಸಿದ್ದರು.
ಇಂದು ಬೆಳಗ್ಗೆ ಹೃದಯಾಘಾತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾುತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇವರ ನಿಧನಕ್ಕೆ ಹಲವು ಗಣ್ಯರು, ಕ”ಗಳು, ಚಿತ್ರರಂಗದ ಖ್ಯಾತನಾಮರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ