ಕಳವು ಮಾಡಿದ್ದ ನಾಲ್ವರು ಖದೀಮರ ಬಂಧನ

ಟಿ.ನರಸೀಪುರ, ಜು.15- ಹಾಡಹಗಲೇ ಮನೆಗೆ ನುಗ್ಗಿ ಕಳವು ಮಾಡಿದ್ದ ನಾಲ್ವರು ಖದೀಮರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಬನ್ನೂರು ಪಟ್ಟಣ ಪೆÇಲೀಸರು ಯಶಸ್ವಿಯಾಗಿದ್ದಾರೆ.
ರಂಗಸಮುದ್ರ ಗ್ರಾಮದ ಮನು(21), ಸುರೇಶ್ ಆಲಿಯಾಸ್ ಗವಿ(27), ಯೋಗೇಶ್ (22) ಹಾಗೂ ಬೆಂಗಳೂರಿನ ಕುಂಬಳಗೋಡು ನಿವಾಸಿ ಶಶಿಕುಮಾರ್(28) ಬಂಧಿತ ಆರೋಪಿಗಳು.
ಕಳೆದ ಜು.6ರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ರಂಗಸಮುದ್ರ ಗ್ರಾಮದ ವೀಣಾ ಕೋಂ ಸಿದ್ದಯ್ಯ ಎಂಬುವವರ ಮನೆಗೆ ನುಗ್ಗಿ 18.5 ಗ್ರಾಂ ಚಿನ್ನ, 4.15 ಲಕ್ಷ ರೂ.ಗಳ ನಗದು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಕಳವು ಪ್ರಕರಣ ದಾಖಲಿಸಿಕೊಂಡು ಬನ್ನೂರು ಪೆÇಲೀಸರು ಖಚಿತ ಮಾಹಿತಿ ಮೇರೆಗೆ ಜು.14 ಬೆಳಗ್ಗೆ 11 ಗಂಟೆ ಸಮಯದಲ್ಲಿ ರಂಗಸಮುದ್ರ ಗ್ರಾಮದ ಗೇಟ್ ಬಳಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳಿಂದ 4.15 ಲಕ್ಷ ರೂ. ಕ್ಯಾಶ್, 65 ಸಾವಿರ ರೂ. ಬೆಲೆಯ ನಾಲ್ಕು ಮೊಬೈಲ್ ಹಾಗೂ 18.5 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಎಸ್‍ಪಿ ಅಮಿತ್‍ಸಿಂಗ್, ಅಡಿಷನಲ್ ಎಸ್ಪಿ ಅಯ್ಯಪ್ಪ ಮಾರ್ಗದರ್ಶನದಲ್ಲಿ ನಂಜನಗೂಡು ಉಪ ವಿಭಾಗದ ಎಸ್‍ಎಸ್‍ಪಿ ಅರುಣಾಶ್ ಗಿರಿ ನೇತೃತ್ವದಲ್ಲಿ ತಿ.ನರಸೀಪುರ ವೃತ್ತ ನೀರಿಕ್ಷಕ ಮನೋಜ್‍ಕುಮಾರ್, ಬನ್ನೂರು ಪಿಎಸ್‍ಐ ಲತೇಶ್ ಕುಮಾರ್, ಎಎಸ್‍ಐ ಶ್ರೀನಿವಾಸ್, ಸಿಬ್ಬಂದಿಗಳಾದ ನಾರಾಯಣ್, ಶಿವಣ್ಣ ಸೇರಿದಂತೆ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ