ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆ

ವಿಜಯಪುರ, ಜು.13- ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಭಯಭೀತಿಗೊಂಡಿದ್ದ ಗ್ರಾಮಸ್ಥರು ಮೀನುಗಾರರ ಸಹಾಯದಿಂದ ಸೇತುವೆ ಬಳಿ ಕಾಣಿಸಿಕೊಂಡ ಬೃಹತ್ ಗಾತ್ರದ ಮೊಸಳೆಯನ್ನು ಹಿಡಿದು ಆಲಮಟ್ಟಿ ಜಲಾಶಯಕ್ಕೆ ಬಿಟ್ಟಿದ್ದಾರೆ. ಮೊಸಳೆಯನ್ನು ಸೆರೆಹಿಡಿಯಲು ಭಯದಲ್ಲಿಯೇ ಹರಸಾಹಸಪಟ್ಟು ಹಿಡಿದು ಜಲಾಶಯಕ್ಕೆ ಬಿಟ್ಟ ನಂತರ ನಿಟ್ಟುಸಿರುಬಿಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ