ಸಾಲ ಬಾಧೆಯಿಂದ ಕೇಬಲ್ ಆಪರೇಟರ್ ಆತ್ಮಹತ್ಯೆ

ಮೈಸೂರು,ಜೂ.6- ಸಾಲ ಬಾಧೆಯಿಂದ ನೊಂದ ಕೇಬಲ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆ.ಆರ್.ಮೊಹಲ್ಲದ ಹಳೆ ಬಂಡಿಕೇರಿ ವಾಸಿ ಬಾಬು(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ನಗರದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ನಂಜನಗೂಡಿಗೆ ಹೋಗಿ ಬೃಂದಾವನ ಲಾಡ್ಜ್‍ನಲ್ಲಿ ತಂಗಿದ್ದ. ಲಾಡ್ಜ್‍ನ ಕೊಠಡಿಯಲ್ಲಿ ವಿಷ ಸೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬೆಳಗ್ಗೆ ಎಷ್ಟು ಹೊತ್ತಾದರೂ ಕೊಠಡಿಯಿಂದ ಹೊರಬಾರದೆ ಇದ್ದುದನ್ನು ಕಂಡು ಲಾಡ್ಜ್‍ನ ಸಿಬ್ಬಂದಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂಜನಗೂಡು ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ