ಮಕ್ಕಳ ಕಳ್ಳರ ವದಂತಿಯ ಹಿನ್ನೆಲೆ: ಸಾರ್ವಜನಿಕರಿಂದ ಐವರ ಕೊಲೆ!

ದುಲೈ (ಮಹಾರಾಷ್ಟ್ರ), ಜು.2- ಮಕ್ಕಳ ಕಳ್ಳರ ಬಗ್ಗೆ ದೇಶದಾದ್ಯಂತ ಹರಡಿರುವ ವದಂತಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ದುಲೈಯಲ್ಲಿ ಸಾರ್ವಜನಿಕರು ಐವರನ್ನು ದಾರುಣವಾಗಿ ಕೊಂದಿರುವ ಘಟನೆ ನಡೆದಿದೆ.
ಕೊಲೆಯಾದವರನ್ನು ಬುಡಕಟ್ಟು ಜನಾಂಗದವ ರೆಂದು ಗುರುತಿಸಲಾಗಿದ್ದು, ಇವರು ರಾಣಿಪಾಡಾದಿಂದ ದುಲೈ ನಗರಕ್ಕೆ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಪ್ರಯಾಣಿಸುವಾಗಲೇ ಈ ದುರ್ಘಟನೆ ನಡೆದಿದೆ.
ಪ್ರಯಾಣದ ವೇಳೆ ಬುಡಕಟ್ಟು ಜನಾಂಗದವರು ಮಕ್ಕಳ ಬಗ್ಗೆ ಮಾತನಾಡುತ್ತಿರುವುದನ್ನು ಆಲಿಸಿದ ಪ್ರಯಾಣಿಕರೊಬ್ಬರು ಇವರು ಮಕ್ಕಳ ಕಳ್ಳರಿರಬಹುದೆಂದು ಭಾವಿಸಿ ಅವರನ್ನು ಥಳಿಸಲು ಆರಂಭಿಸಿದ್ದಾರೆ.
ಸಾರ್ವಜನಿಕರ ಹೊಡೆತದಿಂದ ಇಬ್ಬರು ಪರಾರಿಯಾಗಿದ್ದರೆ, ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೆÇಲೀಸರು 15 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ