ಪ್ರತ್ಯೇಕ ಪದವಿ ಕನ್ನಡ ಅಧ್ಯಯನ ಮಂಡಳಿ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಜು.2- ಪ್ರತ್ಯೇಕ ಪದವಿ ಕನ್ನಡ ಅಧ್ಯಯನ ಮಂಡಳಿ, ಪಠ್ಯ ಕ್ರಮದ ವಿಚಾರ ಮತ್ತು ಬಿಎ, ಬಿಕಾಂ ಮತ್ತಿತರ ಪದವಿ ಕೋರ್ಸ್‍ಗಳಿಗೆ ಬೇರೆ ಬೇರೆ ಪಠ್ಯ ಕ್ರಮವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮೈಸೂರು ವಿವಿ ಕಾರ್ಯಸೌಧದ ಬಳಿ ಇಂದು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘ ಪ್ರತಿಭಟನೆ ನಡೆಸಿತು. ಖ್ಯಾತ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ನೇತೃತ್ವದಲ್ಲಿ ವಿವಿಧ ಸಾಹಿತಿಗಳು, ಕನ್ನಡಪರ ಚಿಂತಕರು ಹಾಗೂ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತ್ಯೇಕ ಪದವಿಯ ಕನ್ನಡ ಅಧ್ಯಯನ ಮಂಡಳಿ ಜಾರಿ ಸೇರಿದಂತೆ ಇನ್ನಿತರ ವಿಚಾರಗಳ ಜಾರಿಗೆ ಆಗ್ರಹಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಸಿಬಿಸಿಎಸ್ ವಿಚಾರದ ಗೊಂದಲವನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು. ಸಾಹಿತಿಗಳಾದ ರಾಮಚಂದ್ರಗೌಡ, ದೇವನೂರು ಮಹದೇವ, ಸಾ.ರಾ.ಸುದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ