ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಜೀವಗಳು ಬಲಿ

ಅಗರ್ತಲ, ಜೂ.29-ಈಶಾನ್ಯ ರಾಜ್ಯ ತ್ರಿಪುರದಲ್ಲಿ ಮಕ್ಕಳ ಕಳ್ಳರು ಎಂಬ ವದಂತಿಗೆ ಇನ್ನೆರಡು ಜೀವಗಳು ಬಲಿಯಾಗಿವೆ. ಪಶ್ಚಿಮ ತ್ರಿಪುರ ಜಿಲ್ಲೆಯ ಸಿಧರಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮುರಬರಿ ಪ್ರದೇಶದಲ್ಲಿ ನಡೆದ ಮೊದಲ ಕೃತ್ಯದಲ್ಲಿ ಉದ್ರಿಕ್ತ ಗುಂಪೆÇಂದು ಮಕ್ಕಳ ಕಳ್ಳರೆಂಬ ಶಂಕೆ ಮೇರೆಗೆ ಉತ್ತರ ಪ್ರದೇಶದ ಮೂರು ವಸ್ತ್ರ ವ್ಯಾಪಾರಿಗಳ ಮೇಲೆ ದಾಳಿ ಮಾಡಿತು. ತೀವ್ರ ಥಳಿತಕ್ಕೆ ಒಳಗಾದ ಜಹೀರ್ ಖಾನ್ (35) ಹತರಾತರು ತೀವ್ರ ಗಾಯಗೊಂಡ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ತ್ರಿಪುರ ಜಿಲ್ಲೆಯಲ ಕಲಾಚೇರಾದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಧ್ವನಿವರ್ಧಕದ ಮೂಲಕ ವದಂತಿ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದ ಇಬ್ಬರ ಮೇಲೆ ಗುಂಪೆÇಂದು ದಾಳಿ ಆಕ್ರಮಣ ನಡೆಸಿ ಹಿಗ್ಗಾ-ಮುಗ್ಗಾ ಥಳಿಸಿತು. ಸುಕಾಂತ್ ಚಕ್ರವರ್ತಿ ಎಂಬ ಯುವಕ ಕೊಲೆಯಾದ. ಈ ಘಟನೆಯಲ್ಲಿ ರಕ್ಷಣೆಗೆ ಧಾವಿಸಿದ ಪೆÇಲೀಸರೂ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ