ಪರಿಶಿಷ್ಟ ಜಾತಿ/ಪಂಗಡದವರ ಸಾಲ ಮನ್ನಾಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಮನವಿ

 

ಬೆಂಗಳೂರು,ಜೂ.29-ಪರಿಶಿಷ್ಟ ಜಾತಿ/ಪಂಗಡದವರು ವಿವಿಧ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಬಜೆಟ್‍ನಲ್ಲಿ ಪರಿಗಣಿಸಬೇಕೆಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಆರ್.ಮೋಹನ್‍ರಾಜ್ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯಕ್ಕಿಂತ ನಮಗೆ ಭೂಮಿ ಭಾಗ್ಯ ಜಾರಿಗೆ ತರಬೇಕು, ವಿದ್ಯಾರ್ಥಿ ವೇತನವನ್ನು ಪರಿಷ್ಕರಣೆ ಮಾಡಬೇಕು, 2003ರಲ್ಲಿ ಮಾಡಿದ್ದು , ನಂತರ 2010ರಲ್ಲಿ ಮಾಡಲಾಯಿತು. ಆದರೆ ಏಳು ವರ್ಷ ಕಳೆದರೂ ಪರಿಷ್ಕರಣೆ ಮಾಡದಿರುವುದು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.

ಎಸ್ಸಿ-ಎಸ್ಟಿ ಜನಾಂಗದವರ ಹೆಸರಿನಲ್ಲಿ ಪಡೆಯುತ್ತಿರುವ, ಪಡೆಯದಿರುವ ಸುಳ್ಳು ಜಾತಿ ಪ್ರಮಾಣವನ್ನು ರದ್ದು ಮಾಡಬೇಕು. ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ದ ಕ್ರಿಮಿನಲ್ ಧಾವೆಯನ್ನು ಹೂಡಬೇಕು ಎಂದು ಒತ್ತಾಯಿಸಿದರು.
ದಲಿತ ಹೋರಾಟಗಾರರ ಮೇಲೆ ಹಾಕಿರುವ ಎಲ್ಲ ಕೇಸ್‍ಗಳನ್ನು ವಾಪಸ್ ಪಡೆಯಬೇಕೆಂದು ಮೋಹನರಾಜ್ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ