ಜೂಜು ಅಡ್ಡೆಯ ಮೇಲೆ ದಾಳಿ, ಒಂಭತ್ತು ಮಂದಿಯ ಬಂಧನ

ಹಾಸನ, ಜೂ.29- ರಾತ್ರಿ ಸಮಯದಲ್ಲಿ ಅರಸೀಕೆರೆ ಪಟ್ಟಣದ ಜೇನುಕಲ್ ನಗರದ ಮನೆಯೊಂದರಲ್ಲಿ ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಸೀಕೆರೆ ನಗರ ಠಾಣೆ ಪೆÇಲೀಸರು ದಾಳಿ ಮಾಡಿ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಅರಸೀಕೆರೆ ಉಪವಿಭಾಗದ ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್ ಜೂಜು ಅಡ್ಡೆ ಮೇಲೆ ದಾಳಿ ಮಾಡಿ ಸರ್ದಾರ್, ಸೆಫಿ, ಸಲಾಂ, ಮೊಹಿನ್, ಎಂ.ಜಿ.ಸಾಹೇಬ್, ಶಕಿಲ್, ಸಾದಿಕ, ರಿಯಾಜ್, ನಟೇಶ, ರಂಗಸ್ವಾಮಿ ಎಂಬುವನ್ನು ವಶಕ್ಕೆ ಪಡೆದು ಜೂಜಿಗಿಟ್ಟಿದ್ದ 5,190 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ