ಮಹಿಳೆಯ ಕೊಲೆಮಾಡಿದ ವ್ಯೆಕ್ತಿಗೆ ಜೀವಾವಧಿ ಶಿಕ್ಷೆ

ಮೈಸೂರು, ಜೂ.29-ಪತಿಯಿಂದ ದೂರವಿದ್ದ ಮಹಿಳೆಯೊಂದಿಗೆ ವಾಸವಿದ್ದ ವ್ಯಕ್ತಿ ಆಕೆಯನ್ನು ಕೊಲೆಗೈದಿದ್ದ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಗರದ ಕುಂಬಾರಕೊಪ್ಪಲು ವಾಸಿ ಕೃಷ್ಣಮೂರ್ತಿ ಶಿಕ್ಷೆಗೆ ಒಳಗಾದ ವ್ಯಕ್ತಿ.
ಸುವರ್ಣ ಎಂಬ ಮಹಿಳೆ ಪತಿಯಿಂದ ದೂರವಾಗಿದ್ದರು. ಆಕೆಯೊಂದಿಗೆ ಈತ ಸ್ನೇಹ ಬೆಳೆಸಿ ಕುಂಬಾರಕೊಪ್ಪಲಿನ ಬಾಡಿಗೆ ಮನೆಯಲ್ಲಿ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಮದ್ಯ ವ್ಯಸನಿಯಾದ ಕೃಷ್ಣಮೂರ್ತಿ ಸುವರ್ಣಳ ಶೀಲ ಶಂಕಿಸಿ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ಈತನನ್ನು ಸಾರ್ವಜನಿಕರೇ ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದರು. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ