ಮೆಡಿಕಲ್ ಶಾಪ್ ಮಾಲೀಕನನ್ನು ಬೈಕ್‍ನಲ್ಲಿ ಹಿಂಬಾಲಿಸಿ ಮಾರ್ಗ ಮಧ್ಯೆ ಡಿಕ್ಕಿ ಹೊಡೆದು 50 ಸಾವಿರ ಹಣ ಹಾಗೂ 50 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿ

 

ಬೆಂಗಳೂರು, ಜೂ.28- ಮೆಡಿಕಲ್ ಶಾಪ್ ಮಾಲೀಕನನ್ನು ಬೈಕ್‍ನಲ್ಲಿ ಹಿಂಬಾಲಿಸಿದ ದರೋಡೆಕೋರರು ಮಾರ್ಗ ಮಧ್ಯೆ ಡಿಕ್ಕಿ ಹೊಡೆದು ಅವರನ್ನು ಬೀಳಿಸಿ 50 ಸಾವಿರ ಹಣ ಹಾಗೂ 50 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಬನಶಂಕರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಾಸ್ತ್ರಿ ನಗರದ 5ನೆ ಕ್ರಾಸ್, 10ನೆ ಮುಖ್ಯ ರಸ್ತೆಯಲ್ಲಿ ರಮೇಶ ಬಾಬು ಅವರಿಗೆ ಸೇರಿದ ಮೆಡಿಕಲ್ ಶಾಪ್ ಇದೆ. ಮೊನ್ನೆ ರಾತ್ರಿ ಎಂದಿನಂತೆ 11.30ರ ಸಮಯದಲ್ಲಿ ಅಂಗಡಿಗೆ ಬೀಗ ಹಾಕಿಕೊಂಡು 50 ಸಾವಿರ ಹಣ ತೆಗೆದುಕೊಂಡು ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು.
ಈ ವೇಳೆ ಬೈಕ್‍ನಲ್ಲಿ ಇಬ್ಬರು ದರೋಡೆಕೋರರು ಇವರ ಬೈಕನ್ನು ಹಿಂಬಾಲಿಸಿಕೊಂಡು ಬಂದು ಮಾರ್ಗ ಮಧ್ಯೆ ರಮೇಶಬಾಬು ಬೈಕ್‍ಗೆ ಡಿಕ್ಕಿ ಹೊಡೆದು ಬೀಳಿಸಿದ್ದಾರೆ.
ನಂತರ ಕ್ಷಮಿಸಿ ಎಂದು ನಾಟಕೀಯವಾಗಿ ರಮೇಶಬಾಬು ಅವರನ್ನು ಎಬ್ಬಿಸಿ ಸಮಾಧಾನ ಮಾಡುವ ಹಾಗೆ ರಸ್ತೆ ಪಕ್ಕಕ್ಕೆ ಕರೆದೊಯ್ದು ಬೆದರಿಸಿ ಅವರ ಕೊರಳಲ್ಲಿದ್ದ 50 ಗ್ರಾಂ ತೂಕದ ಸರ ಹಾಗೂ ಬ್ಯಾಗ್‍ನಲ್ಲಿದ್ದ 50 ಸಾವಿರ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ