ಕುಖ್ಯಾತ ಸರಗಳ್ಳರ ಬಂಧನ

ಹುಬ್ಬಳ್ಳಿ- ಸರ ಕಳ್ಳತನ ಮಾಡುತ್ತಿದ್ದ ಇಬ್ಬರ ಆರೋಪಿತರನ್ನು ಬಂಧಿಸುವಲ್ಲಿ ನವನಗರ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾದಚಾರಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ರೆಹಮತ್‌ ಧಾರವಾಡ, ಇಸಾಕ್‌ಅಹ್ಮದ್ ಸುತಾರ್ ಎಂಬಾತರನ್ನು ನವನಗರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಬೈಕ್‌ನಲ್ಲಿ ಬಂದು ಮಹಿಳೆಯರ ಕೊರಳಲ್ಲಿನ ಸರಗಳನ್ನು ಕಿತ್ತು ಪರಾರಿಯಾಗುತ್ತಿದ್ದರು.‌ ಈ ಸಂಬಂಧಾ ಸಾಕಷ್ಟು ಪ್ರಕರಣಗಳು ಕೂಡ ದಾಖಲಾಗಿದ್ದವು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನವನಗರ ಎಪಿಎಂಸಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರ ಆರೋಪಿತರು ಸೇರಿದಂತೆ 25 ಗ್ರಾಮ್ ಚಿನ್ನಾಭರಣ, ಎರಡು ಬೈಕ್‌ಗಳು ಜಪ್ತಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ