ದೇವಾಲಯದ ಬೀಗ ಹಾಕಿದ್ದರೂ ಹುಂಡಿ ಮಾಯ!

ಮೈಸೂರು, ಜೂ.27- ದೇವಾಲಯದ ಬೀಗ ಹಾಕಿದಂತೆಯೇ ಇದೆ. ಆದರೂ ಗರ್ಭಗುಡಿ ಮುಂಭಾಗದಲ್ಲಿದ್ದ ಹುಂಡಿ ಕಾಣೆಯಾಗಿದೆ. ಇಂತಹ ಘಟನೆ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ನಡೆದಿದೆ. ಬೀಗ ಹಾಕಿದಂತೆಯೇ ಇದೆ. ಅದು ಹೇಗೆ ಕಳ್ಳರು ಒಳಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಹುಂಡಿಯನ್ನು ಕದ್ದು ಅದರಲ್ಲಿದ್ದ ಹಣ ದೋಚಿ ಒಂದು ಕಿಲೋ ಮೀಟರ್ ದೂರದಲ್ಲಿ ಹುಂಡಿ ಎಸೆದು ಪರಾರಿಯಾಗಿದ್ದಾರೆ. ಇದು ಗ್ರಾಮಸ್ಥರದಲ್ಲಿ ಅಚ್ಚರಿ, ಆತಂಕ ಮೂಡಿಸಿದೆ. ದೇವಾಲಯದ ಅರ್ಚಕ ಶಿವಪ್ಪ ಹಾಗೂ ಗ್ರಾಮದ ಪಟೇಲರ ಬಳಿ ಬೀಗದ ಕೀ ಇರುತ್ತದೆ. ಇವರಿಗೂ ಕಳ್ಳತನ ಆಗಿರುವುದು ಗೊತ್ತಿಲ್ಲ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ಬಾಗಿಲು ತೆಗೆದು ಒಳಹೋದಾಗಲೇ ಹುಂಡಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ