ದೇವಾಲಯದಲ್ಲಿ ಕಳ್ಳತನ ಹಿಗ್ಗಾ ಮುಗ್ಗ ಥಳಿಸಿದ ಜನ

ಪಾವಗಡ, ಜೂ.26- ದೇವಾಲಯದಲ್ಲಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಚೋರ ಸಾರ್ವಜನಿಕರಿಗೆ ಸಿಕ್ಕಿ ಬಿದ್ದು ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಪೆಂಡ್ಲಾ ಜೀವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಂಜನೇಯ ದೇಗುಲದಲ್ಲಿ ಕಳ್ಳತನ ಮಾಡಲು ಮೂವರು ಚೋರರು ಬಂದು ಕಳ್ಳತನ ಮಾಡಿದ್ದು , ಗಲಾಟೆಯಿಂದ ಎಚ್ಚೆತ್ತ ಗ್ರಾಮಸ್ಥರು ದೇವಾಲಯದ ಬಳಿ ಜಮಾವಣೆಗೊಂಡು ಕಳ್ಳರ ಶೋಧಕ್ಕೆ ಮುಂದಾದಾಗ ಮೂವರಲ್ಲಿ ಒಬ್ಬ ಪರಾರಿಯಾಗುತ್ತಿದ್ದಾಗ ಗುಂಡಿಗೆ ಬಿದ್ದಿದ್ದಾನೆ. ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಮೇಲೆ ಎದ್ದು ಹೋಗಲಾಗದೆ ಗುಂಡಿಯಲ್ಲೇ ಬಿದ್ದಿದ್ದ. ಆಗ ಆತನನ್ನು ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ. ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ