ಕಾರು ಅಪಘಾತದಲ್ಲಿ ಯುವಕನ ಧಾರುಣ ಸಾವು

ಚಿತ್ರದುರ್ಗ, ಜೂ.25- ತಿಂಗಳು ಕಳೆದಿದ್ದರೆ ಹಸೆಮಣೆ ಏರಬೇಕಾಗಿದ್ದ ಮಧುಮಗ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸದುರ್ಗ ಬಳಿಯ ಬೆಳಗೂರು ಸಮೀಪ ಸಂಭವಿಸಿದೆ.
ಚಿತ್ರದುರ್ಗದ ಬಾರ್‍ಲೈನ್ ರಸ್ತೆಯ ನಿವಾಸಿ ರಂಜಿತ್ (25) ಮೃತಪಟ್ಟ ಯುವಕ.
ಈತನಿಗೆ ಮದುವೆ ನಿಶ್ಚಯವಾಗಿದ್ದು , ಮದುವೆಗೆ ಇನ್ನೊಂದು ತಿಂಗಳಿತ್ತು. ಈ ಸಂಬಂಧ ಕುರುಬರಹಳ್ಳಿಯಲ್ಲಿ ಶಾಸ್ತ್ರ ಕೇಳಿ ನಂತರ ಬೆಳಗೂರಿನ ಸಂಬಂಧಿಕರ ಮನೆಗೆ ತೆರಳಿ ಚಿತ್ರದುರ್ಗಕ್ಕೆ ವಾಪಸಾಗುತ್ತಿದ್ದಾಗ ಊರಿನಿಂದ ಸಮೀಪದೂರ ತೆರಳುತ್ತಿದ್ದಂತೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಶ್ರೀರಾಂಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ