
ನೋಯ್ಡಾ,ಜೂ.23- ಯುವತಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಭಗ್ನಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗ್ರೇಟರ್ ನೋಯ್ಡಾದ ಕಾಸ್ನಾದಲ್ಲಿ ನಡೆದಿದೆ.
ದಾದ್ರಿ ನಿವಾಸಿ ಕುಲ್ದೀಪ್ ಅನೇಕ ದಿನಗಳಿಂದ ಕಿರಾಣಿ ಅಂಗಡಿಯಲ್ಲಿ ಕೆಲಸ ಯುವತಿಯನ್ನುಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಆಕೆ ಪೆÇಲೀಸರಿಗೆ ದೂರು ಕೂಡ ನೀಡಿದ್ದಳು.
ನಿನ್ನೆ ಸಹ ಕುಲ್ದೀಪ್ ಆಕೆಯನ್ನು ಮದುವೆಯಾಗುವಂತೆ ಪೀಡಿಸಿದ್ದು, ಇದಕ್ಕೆ ಉತ್ತರ ನೀಡದಿದ್ದಕ್ಕೆ ಕೋಪಗೊಂಡು ಆಕೆಗೆ ಚಾಕುವಿನಿಂದು ಇರಿದು, ಆತನೂ ಕೂಡ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.