ಯೋಗ ಎಲ್ಲರಿಗೂ ಅಗತ್ಯ: ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಭಾರತೀಯ ಜನತಾ ಪಕ್ಷ ರಾಜ್ಯ ಕಚೇರಿಯ ಮುಂದೆ ಆಯೋಜಿಸಿದ್ದ ಅಂತರಾಷ್ತ್ರೀಯ ಯೋಗ ದಿನಾಚರಣೆಯ ಸಮಾರಂಭದಲ್ಲಿ ಮಾಜಿ ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಾಲ್ಗೊಂಡು “ಯೋಗವು ಎಲ್ಲರಿಗೂ ಅಗತ್ಯ, ಅದನ್ನು ದೈನಂದಿನ ಅಭ್ಯಾಸ ಮಾಡಬೇಕು. ಇದು ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಮಾತ್ರವಲ್ಲ, ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ” ಎಂದರು.

ಈ ಸಮಾರಂಭ ದಲ್ಲಿ ಸ್ವಚ್ಛ ಭಾರತ ಅಭಿಯಾನದ ಅನುಗುಣವಾಗಿ ಬಿಜೆಪಿಯ ಪ್ರಕಾಶನ ಪ್ರಕೋಷ್ಠದ ಅಧ್ಯಕ್ಷರಾದ ಎಂ. ನರಸಿಂಹಮೂರ್ತಿಯವರ “ಉತ್ತಮ ಸಮಾಜಕ್ಕೆ ವ್ಯಕ್ತಿಯ ಆರೋಗ್ಯ ಹಾಗು ಪರಿಸರದ ಆರೋಗ್ಯ ಎರಡೂ ಮುಖ್ಯ” ಎಂಬ ಪುಸ್ತಕವನ್ನು ಯಡ್ಡ್ಯೂರಪ್ಪನವರು ಬಿಡುಗಡೆ ಮಾಡಿದರು.

ಕಾರ್ಯಕ್ರಮ ವನ್ನು ಬಿಜೆಪಿಯ ವೈದ್ಯಕೀಯ ಪ್ರಕೋಷ್ಠ ಆಯೋಜಿಸಿದ್ದು, ಇತರ ಪ್ರಕೋಷ್ಠದ ಪ್ರಮುಖರು, ಬಹು ಜನ ಕಾರ್ಯಕರ್ತರು, ಹಾಗು ಶಾಲಾ ಮಕ್ಕಳು ಪಾಲ್ಗೊಂಡಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ