ವಿಶ್ವಯೋಗ ದಿನಾಚರಣೆ

ಹುಬ್ಬಳ್ಳಿ- ಅಂತಾರಾಷ್ಟ್ರೀಯ ಯೋಗ ದಿನ ‌ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯೋಗ ದಿನಾಚರಣೆ ಅಚರಿಸಲಾಯಿತು. ನಗರದ ಶ್ರೀನಿವಾಸ್ ಗಾರ್ಡನ್, ರಾಯ್ಕರ್ ಗೆಸ್ಟ್ ಹೌಸ್ ಹಾಗೂ ನವೀನ್ ಪಾರ್ಕ್ ನಲ್ಲಿ ಸೇರಿದಂತೆ 32 ಕಡೆಗಳಲ್ಲಿ ಬೃಹತ್ ಶಿಬಿರಗಳನ್ನು ಆಯೋಜನೆ ಮಾಡಲಾಗಿತ್ತು. ನಗರದ ಮೂಲೆ ಮೂಲೆಗಳಿಂದ ಸಾವಿರಾರು ಜನ ಯೋಗಪಟುಗಳು ಭಾಗಿಯಾಗಿದ್ದರು ಸಂಸದ ಪ್ರಲ್ಹಾದ ಜೋಶಿ ಹಾಗೂ ಆರ್ ಎಸ್ ಎಸ್ ಮುಖಂಡ ಸು ರಾಮಣ್ಣ ಭಾಗಿಯಾಗಿ ವಿವಿಧ ಆಸಗಳನ್ನು ಹಾಕಿದರು. ಆರೋಗ್ಯ ಭಾರತಿ ಮತ್ತು ಲೋಕಹಿತ ಟ್ರಸ್ಟ್ ಅವರ ಸಂಯುಕ್ತ ಆಶ್ರಯದಲ್ಲಿ ಗೋಕುಲ ಗಾರ್ಡನ್ ನಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಾರು ಜನರ ಮಹಿಳೆಯರು, ಮಕ್ಕಳು ಹಾಗೂ ವೃದ್ದರು ಪಾಲ್ಗೊಂಡಿದ್ದರು. ಬೈಲಬಸಪ್ಪ ರೊಟ್ಟಿಗವಾಡ ಅವರ ಮಾರ್ಗದರ್ಶನದಲ್ಲಿ ಯೋಗಾಸನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಕಿಮ್ಸ್ ಪ್ರಿನ್ಸಿಪಾಲ್ ಡಾ. ಕೆ.ಎಫ್. ಕಮ್ಮಾರ ವಹಿಸಿಕೊಂಡಿದ್ದರು. ಭಾರತೀಯ ಶಿಕ್ಷಣ ಮಂಡಲದ ವಕ್ತಾರ ಶಂಕರಾನಂದ, ಸಂಸದ ಪ್ರಲ್ಹಾದ ಜೋಶಿ ಮತ್ತಿತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ