ರಾಜ್ಯದಲ್ಲಿ ಉತ್ತಮ ಮಳೆ, ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳ

ಹಾಸನ, ಜೂ.20- ಮುಂಗಾರು ಪೂರ್ವಕ್ಕೂ ಮೊದಲೇ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು , ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಹಾಸನದ ಜೀವ ನದಿ ಹೇಮಾವತಿ ಜಲಾಶಯದ ಒಳ ಹರಿವು ಕೂಡ ಹೆಚ್ಚಿದ್ದು, ಹೇಮೆಯ ಒಡಲಿನ ಹರಿವಿಗೆ ಇನ್ನು 22 ಅಡಿಗಳಷ್ಟೇ ಬಾಕಿ ಇದೆ.
ಹೇಮಾವತಿ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮಥ್ರ್ಯ 2922 ಅಡಿಗಳು. ಹಾಸನ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಈಗಾಗಲೇ ಹೇಮೆಗೆ 2900 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹಣಾ ಸಾಮಥ್ರ್ಯ 37.103 ಟಿಎಂಸಿ. ಪ್ರಸ್ತುತದಲ್ಲಿ ನೀರಿನ ಸಂಗ್ರಹ 19.92 ಟಿಎಂಸಿ ಇದೆ. ಕಳೆದ ವರ್ಷ ಇದೇ ದಿನದಲ್ಲಿ 3.35 ಟಿಎಂಸಿ ನೀರು ಸಂಗ್ರಹವಿತ್ತು. ಪ್ರಸ್ತುತ ನೀರಿನ ಒಳ ಹರಿವಿನ ಪ್ರಮಾಣ 4645 ಕ್ಯೂಸೆಕ್ ಇದ್ದರೆ ಕಳೆದ ವರ್ಷ 842 ಕ್ಯೂಸೆಕ್‍ಗಳಿತ್ತು. ಮತ್ತು 200 ಕ್ಯೂಸೆಕ್ ಒಳ ಹರಿವಿದ್ದರೆ ಕಳೆದ ವರ್ಷ 150 ಕ್ಯೂಸೆಕ್‍ಗಳಷ್ಟಿತ್ತು. ಒಟ್ಟಾರೆ ಕಳೆದ ನಾಲ್ಕೈದು ವರ್ಷಗಳಿಂದ ಬರದ ಬೇಗೆಯಿಂದ ಬಸವಳಿದಿದ್ದ ಹೇಮಾವತಿ ಜಲಾನಯನ ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಹೇಮೆ ಒಡಲಿನಲ್ಲಿ ಉತ್ತಮ ನೀರು ಸಂಗ್ರಹವಾಗಿದ್ದು , ಕೃಷಿ ಚಟುವಟಿಕೆಗಳು ಭರದಿಂದಲೇ ನಡೆಯಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ