ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಟಾಪ್-10 ತೆರಿಗೆ ವಂಚಕರ ಪಟ್ಟಿ:

 

ಟಾಪ್-10 ತೆರಿಗೆ ವಂಚಕರ ಪಟ್ಟಿಯಲ್ಲಿ ಎಂಎಫ್‍ಆರ್ ಡೆವಲಪ್ ಪ್ರೈ.ಲಿ. ಯಲಹಂಕ, ಗಲ್ಫ್ ಆಯಿಲ್ ಕಾಪೆರ್Çರೇಷನ್ ಯಲಹಂಕ, ತಂಗಲಿನ್ ಡೆವಲಪ್‍ಮೆಂಟ್ ಲಿ. ಆರ್‍ಆರ್ ನಗರ, ಟೋಟಲ್ ಮಾಲ್ ಮಹದೇವಪುರ, ಟ್ಯಾಗ್‍ಲಿನ್ ಡೆವಲಪ್‍ಮೆಂಟ್ ಲಿ. ಆರ್‍ಆರ್ ನಗರ, ಅಮಾಲ್ಗಮೇಟೆಡ್ ಕಾಫಿ ಟ್ರೇಡಿಂಗ್ ಕಂಪೆನಿ ವಿಠ್ಠಲ್‍ಮಲ್ಯ ರೋಡ್, ಯಶೋಧ ಮೆಡಿಕೇರ್ ಅಂಡ್ ರಿಸರ್ಚ್ ಸೆಂಟರ್ ಮಹದೇವಪುರ, ಆಸ್ಟ್ರಾಜಿಂಕಾ ಪ್ರೈ.ಲಿ. ಯಲಹಂಕ, ಬ್ರಿಗೇಡ್ ಎಂಟರ್‍ಪ್ರೈಸಸ್ ಪ್ರೈ.ಲಿ. ಸುಬ್ರಹ್ಮಣ್ಯನಗರ, ಮಾನ್ಯತಾ ಪ್ರಾಜೆಕ್ಟ್ಸ್ ಪ್ರೈ.ಲಿ. ಯಲಹಂಕ ಇವುಗಳು ಪಟ್ಟಿಯಲ್ಲಿದ್ದು, ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಆಡಳಿತಾವಧಿಯಲ್ಲಿ ಪಾಲಿಕೆಯ 11 ಆಸ್ತಿಗಳನ್ನು ಅಡಮಾನವಿಡಲಾಗಿತ್ತು. ಅದರಲ್ಲಿ 6 ಆಸ್ತಿಗಳನ್ನು ವಾಪಸ್ ಪಡೆಯಲಾಗಿದೆ. ಮೊದಲ ಹಂತವಾಗಿ ಕೆಂಪೇಗೌಡ ಮ್ಯೂಜಿಯಂ, ಮೇಯೋಹಾಲ್, ಜಾನ್ಸನ್ ಮಾರುಕಟ್ಟೆ ಮತ್ತು ಮಲ್ಲೇಶ್ವರಂ ಮಾರುಕಟ್ಟೆಯನ್ನು ಋಣಮುಕ್ತಗೊಳಿಸಲಾಗಿದೆ.
ಎರಡನೆ ಹಂತದಲ್ಲಿ ರಾಜಾಜಿನಗರ ವಾಣಿಜ್ಯ ಸಂಕೀರ್ಣ, ಪಾಟ್ರಿಟೌನ್‍ನ ಸ್ಲ್ಯಾಟ್ರಿ ಹೌಸ್‍ಅನ್ನು ಋಣಮುಕ್ತಗೊಳಿಸಲಾಗಿದೆ ಎಂದ ಶಿವರಾಜ್ ಅವರು ಉಳಿದ ಪಿಯುಬಿ ಕಟ್ಟಡ, ಕೆಆರ್ ಮಾರುಕಟ್ಟೆ, ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ, ಕಲಾಸಿಪಾಳ್ಯ ಮಾರುಕಟ್ಟೆಯನ್ನು ಋಣಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು.

ಸಾಲಮುಕ್ತ: ಬಿಬಿಎಂಪಿ ಮಾಡಿರುವ ಸಾಲದಿಂದ ಮುಕ್ತವಾಗಲು ಹಲವು ಕ್ರಮ ಕೈಗೊಳ್ಳಲಾಗಿದ್ದು, ಹಿಂದಿನ ಸಾಲಿನಲ್ಲಿ ಹುಡ್ಕೋದಿಂದ ಪಡೆದ 1433 ಕೋಟಿ ಸಾಲದಲ್ಲಿ 500 ಕೋಟಿಯನ್ನು ತೀರಿಸಲಾಗಿದೆ. ಶೇ.10.25 ಬಡ್ಡಿ ದರದಲ್ಲಿ ಪಡೆದ ಸಾಲವನ್ನು ಶೇ.8.05 ಬಡ್ಡಿ ದರಕ್ಕೆ ಪರಿವರ್ತಿಸಿ 871 ಕೋಟಿಯನ್ನು ಎಸ್‍ಬಿಐಗೆ ವರ್ಗಾವಣೆ ಮಾಡಿದ್ದರಿಂದ ಸುಮಾರು 83 ಕೋಟಿಯಷ್ಟು ನಮಗೆ ಉಳಿತಾಯವಾಯಿತು ಎಂದು ಶಿವರಾಜ್ ಹೇಳಿದರು.
ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ಮುಂಗಾರು ಮಳೆ ಪ್ರಾರಂಭದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ