ತಮಿಳುನಾಡಿಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಹೊಸಕೋಟೆ, ಜೂ.19-ಬಳ್ಳಾರಿಯಿಂದ ತಮಿಳುನಾಡಿನ ಸೇಲಂಗೆ ಸಾಗಿಸಾಲಗುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಜಾರನುವಾರುಗಳನ್ನು ಹೊಸಕೋಟೆ ಠಾಣೆ ಪೆÇಲೀಸರು ರಕ್ಷಿಸಿದ್ದಾರೆ. ಅನಿಮಲ್ ವೆಲ್‍ಫೇರ್ ಬೋರ್ಡ್ ಆಪ್ ಇಂಡಿಯ ಎಂಬ ಪ್ರಾಣಿ ದಯಾ ಸಂಘದವರು ನೀಡಿದ ಕಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಪೆÇಲೀಸರು ಸಮ್ನತ್ (27) ಹಾಗೂ ಜೀಜೋ (27) ಎಂಬ ಆರೋಪಿಗಳನ್ನು ವಶಕ್ಕೆ ಪಡಿಸಿಕೊಂಡು ಅಕ್ರಮ ಸಾಗಾಣಿಕೆಗೆ ಬಳಸಿದ ಲಾರಿಯನ್ನು ಜಪ್ತಿ ಮಾಡಿಕೊಂಡಿರುವ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಸಾಗಿಸುತಿದ್ದ 7 ಹಸುಗಳು ಹಾಗೂ 33 ಎಮ್ಮೆಗಳನ್ನು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿರುವ ಗೋವಿನ ಆಶ್ರಮಕ್ಕೆ (ಗೋಶಾಲೆ) ಕಳುಹಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯ ನೇತೃತ್ವವನ್ನು ಹೊಸಕೋಟೆ ಠಾಣೆಯ ಪಿಎಸ್ ಐ ರಂಗನಾಥ್ ನೇತೃತ್ವದಲ್ಲಿ ಎಎಸ್‍ಐಗಳಾದ ಸಿದ್ದರಾಜು, ಬುಡ್ಡೇಗೌಡ, ರಮೇಶ್, ಸಿ ಮಂಜುನಾಥ್ ಹಾಗೂ ಇನ್ನಿತತರು ಬಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ