ಕಾರು ಅಪಘಾತ ಓರ್ವ ಸಾವು, ಮೂರು ಜನ ಗಂಭೀರ ಗಾಯ

ಆನೇಕಲ್,ಜೂ.18-ಸ್ಕೈವಾಕ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಗೆ ಓಮ್ನಿ ಕಾರು ಮಗುಚಿ ಬಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಸೂರ್ಯ ಸಿಟಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪರಮಶಿವಂ(56) ಮೃತಪಟ್ಟ ದುರ್ದೈವಿ. ಇಂದು ಬೆಳಗ್ಗೆ ಓಮ್ನಿ ಕಾರಿನಲ್ಲಿ ಪರಮಶಿವಂ, ಭಾಸ್ಕರನ್, ಸತೀಶ್, ಸತ್ಯರಾಜ್ ನಾಲ್ವರು ತೆರಳುತ್ತಿದ್ದರು. ಈ ವೇಳೆ ತಿರುಮಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸ್ಕೈವಾಕ್ ನಿರ್ಮಾಣಕ್ಕೆಂದು ಗುಂಡಿಯನ್ನು ತೆರೆಯಲಾಗಿತ್ತು. ಗುಂಡಿ ಕಾಣಿಸದೆ ಓಮ್ನಿ ಕಾರು ಮಗುಚಿ ಬಿದ್ದಿದೆ. ಪರಮಶಿವಂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಭಾಸ್ಕರ್, ಸತೀಶ್, ಸತ್ಯರಾಜ್ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸೂರ್ಯಸಿಟಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ